ಮಂಗಳೂರು: ಉದ್ಯಮಿಗೆ ಜೀವ ಬೆದರಿಕೆಯೊಡ್ಡಿದ ಆರೋಪಿಯ ಸೆರೆ

Update: 2023-01-26 17:58 GMT

ಮಂಗಳೂರು: ನಗರದ ಉದ್ಯಮಿಗೆ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನಿವಾಸಿ ದಿನೇಶ್ ಶೆಟ್ಟಿ (55) ಎಂಬಾತನನ್ನು ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂದರು ಠಾಣಾ ವ್ಯಾಪ್ತಿಯ ಪಟಾಕಿ ಅಂಗಡಿಯೊಂದರ ಮಾಲಕ ಮುರಳೀಧರ ಪೈಗೆ ಆರೋಪಿ ದಿನೇಶ್ ಶೆಟ್ಟಿ 5 ಲಕ್ಷ ರೂ. ಮೌಲ್ಯದ ಪಟಾಕಿ ಬೇಕಾಗಿದ್ದು, ಅದಕ್ಕಾಗಿ ನಗರದ ಹೋಟೆಲ್‌ಗೆ ಬರಬೇಕೆಂದು ಸೂಚಿಸಿದ್ದ. ಆದರೆ ಅದಕ್ಕೆ ಉದ್ಯಮಿಯು ಒಪ್ಪದಿದ್ದ ಕಾರಣಕ್ಕೆ ಮರುದಿನ ದಿನೇಶ್ ಶೆಟ್ಟಿ ಮತ್ತಿತರ 4 ಮಂದಿ ಅಂಗಡಿಗೆ ನುಗ್ಗಿ 5 ಲಕ್ಷ ರೂ. ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. ಅಲ್ಲದೆ ಉದ್ಯಮಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ದೂರಲಾಗಿತ್ತು.

ಆರೋಪಿ ದಿನೇಶ್ ಶೆಟ್ಟಿ ಈ ಹಿಂದೆ ಭೂಗತ ಪಾತಕಿ ರವಿಪೂಜಾರಿಯ ಸಹಚರನಾಗಿದ್ದು, ಕರಾವಳಿಯಲ್ಲಿ ಕೊಲೆ, ಕೊಲೆ ಬೆದರಿಕೆ ಸಹಿತ ಹಲವು ದುಷ್ಕೃತ್ಯದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Similar News