ಮೇಲಧಿಕಾರಿಗಳ ಕಿರುಕುಳ ಆರೋಪ: ಬಿಎಂಟಿಸಿ ನಿರ್ವಾಹಕ ಆತ್ಮಹತ್ಯೆಗೆ ಯತ್ನ

Update: 2023-01-27 15:10 GMT

ಬೆಂಗಳೂರು, ಜ.27: ರಾಜರಾಜೇಶ್ವರಿ ನಗರ ಬಿಎಂಟಿಸಿ ಘಟಕ 21ರ ನಿರ್ವಾಹಕರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ವರದಿಯಾಗಿದೆ.

ರಂಗನಾಥ್ ಎಂಬುವರು ಡೆತ್‍ನೋಟ್ ಬರೆದಿಟ್ಟು, ಡಿಪೋದಲ್ಲೆ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾರೆ. ಆಗ ಅಲ್ಲಿದ್ದ ಸಿಬ್ಬಂದಿ ನಿರ್ವಾಹಕನನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದಿದ್ದಾರೆ. 

ಅಧಿಕಾರಿಗಳ ಕಿರುಕುಳದಿಂದ ಈ ರೀತಿ ಮಾಡಿಕೊಂಡಿದ್ದಾರೆ ಎಂದು ಸಿಬ್ಬಂದಿ ಆರೋಪಿದ್ದಾರೆ. ಈ ಹಿಂದೆಯೂ ಕೂಡ ಅದೇ ಘಟಕದಲ್ಲಿ ಒಬ್ಬ ಚಾಲಕ, ಇದೇ ರೀತಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್‍ನೋಟ್ ಬರೆದಿಟ್ಟು, ಘಟಕದ ಆವರಣದ ಒಳಗೆ ಇರುವ ಮರಕ್ಕೆ ನೇಣುಹಾಕಿಕೊಂಡು ಮೃತಪಟ್ಟಿದ್ದರು.

Similar News