ಬೆಂಗಳೂರಿನಿಂದ ವಿಜಯವಾಡಕ್ಕೆ ವಾರದಲ್ಲಿ 2 ದಿನ ಐರಾವತ ಬಸ್ ಸೇವೆ, ವೇಳಾಪಟ್ಟಿ ಹೀಗಿದೆ...

Update: 2023-01-31 12:31 GMT

ಬೆಂಗಳೂರು, ಜ.31: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಿಸಿ) ಬೆಂಗಳೂರು-ವಿಜಯವಾಡ ಮಾರ್ಗದ ಐರಾವತ ಕ್ಲಬ್ ಕ್ಲಾಸ್ ಸಾರಿಗೆಯ ವಾರಾಂತ್ಯದ ಕಾರ್ಯಾಚರಣೆಯನ್ನು ಆರಂಭಿಸಿದೆ. 

ಕೆಎಸ್ಸಾರ್ಟಿಸಿ ಬೆಂಗಳೂರು ಕೇಂದ್ರೀಯ ವಿಭಾಗದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಶಾಂತಿನಗರ ಬಸ್ ನಿಲ್ದಾಣದಿಂದ ಬೆಂಗಳೂರು-ವಿಜಯವಾಡಕ್ಕೆ ವಯಾ ಸಿಲ್ಕ್ ಬೋರ್ಡ್, ಇಬ್ಲೂರು ಜಂಕ್ಷನ್, ಮಾರತ್‍ಹಳ್ಳಿ, ಐಟಿಐ ಗೇಟ್, ಹೊಸಕೋಟೆ, ತಿರುಪತಿ, ನೆಲ್ಲೂರು, ಗುಂಟೂರು ಮಾರ್ಗದಲ್ಲಿ ಐರಾವತ್ ಕ್ಲಬ್ ಕ್ಲಾಸ್ ಬಸ್ ಸಂಚರಿಸಲಿದೆ. 

ಪ್ರತಿ ಶುಕ್ರವಾರ ಮತ್ತು ಶನಿವಾರ ಬೆಂಗಳೂರಿನಿಂದ ಸಂಜೆ 7.30ಕ್ಕೆ ಬಸ್ ಹೊರಟು ಮರುದಿನ ಬೆಳಗ್ಗೆ 8.30ಕ್ಕೆ ವಿಜಯವಾಡ ತಲುಪಲಿದೆ. 

ವಿಜಯವಾಡದಿಂದ ರಾತ್ರಿ 7.30ಕ್ಕೆ ಹೊರಟು ಮರುದಿನ ಬೆಳಗ್ಗೆ 8.30ಕ್ಕೆ ಬೆಂಗಳೂರು ತಲುಪಲಿದೆ. ಶುಕ್ರವಾರದಂದು ವಯಸ್ಕರಿಗೆ ಪ್ರತಿ ಟಿಕೆಟ್ ದರ 1,420, ಶನಿವಾರ 1,310 ನಿಗದಿಪಡಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.  

Similar News