ಬೆಂಗಳೂರು | ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಕಾರು ಢಿಕ್ಕಿ: ಗಂಭೀರ ಗಾಯ

Update: 2023-02-04 12:54 GMT

ಬೆಂಗಳೂರು, ಫೆ.4: ಕೆಂಗೇರಿ ವ್ಯಾಪ್ತಿಯ ಬಿಎಂಐಎಸ್ ಬಳಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ವೇಗವಾಗಿ ಬರುತ್ತಿದ್ದ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯವಾಗಿ ಚಿಕಿತ್ಸೆಗಾಗಿ  ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.  

ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ಸ್ವಾತಿ(21) ಎಂದು ಗುರುತಿಸಲಾಗಿದೆ. 

ಕಾರು ಗುದ್ದಿದ ರಭಸಕ್ಕೆ ವಿದ್ಯಾರ್ಥಿನಿ ಸ್ವಲ್ಪ ಮೇಲಕ್ಕೆ ಹಾರಿ ಬಿದ್ದಿದ್ದಳು. ಅಪಘಾತದಲ್ಲಿ ತೀವ್ರ ಗಾಯವಾಗಿದ್ದ ಸ್ವಾತಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ ಎಂದು ತಿಳಿದು ಬಂದಿದೆ. 

ಇದೀಗ ಅಪಘಾತಕ್ಕೆ ಬಿಬಿಎಂಪಿ, ಪೊಲೀಸರೇ ನೇರ ಕಾರಣ ಎಂದು ಸ್ಥಳೀಯರು, ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಈ ಕಾಲೇಜಿನ ಮುಂಭಾಗ ರಸ್ತೆಯ ಎರಡು ಕಡೆ ಹಂಪ್‍ಗಳನ್ನು ಹಾಕಲಾಗಿತ್ತು. ಹಂಪ್‍ಗಳು ಇದ್ದಾಗ ವಾಹನಗಳು ನಿಧಾನವಾಗಿ ಬರುತ್ತಿದ್ದು, ವಿದ್ಯಾರ್ಥಿಗಳು ರಸ್ತೆದಾಟಲು ಅನುಕೂಲವಾಗುತಿತ್ತು. 

ಆದರೆ 8 ತಿಂಗಳ ಹಿಂದೆ ಮೋದಿ ಕಾರ್ಯಕ್ರಮ ನಿಮಿತ್ತ ಇದೆ ರಸ್ತೆಯಲ್ಲಿ ಸಾಗಿದ್ದರು. ಆಗ ಬಿಬಿಎಂಪಿ ಅಧಿಕಾರಿಗಳು ಹಂಪ್‍ಗಳನ್ನು ತೆರವು ಮಾಡಿದ್ದರು, ಮತ್ತೆ ಹಂಪ್‍ಗಳನ್ನ ಬಿಬಿಎಂಪಿ ಟ್ರಾಫಿಕ್ ವಿಭಾಗದ ಅಧಿಕಾರಿಗಳು ಹಾಕಿಲ್ಲ. ಇದೆ ಜಾಗದಲ್ಲಿ ಆರ್ ವಿ ಕಾಲೇಜು, ಆರ್ಕಿಡ್ಸ್ ಶಾಲೆ, ಬಿಐಎಂಎಸ್ ಕಾಲೇಜಿದ್ದು ಸಾವಿರಾರು ವಿದ್ಯಾರ್ಥಿಗಳು ರಸ್ತೆ ದಾಟಬೇಕು. ಇಲ್ಲಿಗೆ ಒಂದು ಸ್ಕೈವಾಕ್ ವ್ಯವಸ್ಥೆ ಅನಿವಾರ್ಯ ಇದೆ. ಕೂಡಲೇ ಇಲ್ಲಿ ಹಂಪ್ಸ್‍ಗಳನ್ನು ನಿರ್ಮಾಣ ಮಾಡಬೇಕು ಎಂದು ವಿದ್ಯಾರ್ಥಿ ಹಾಗೂ ಸಾರ್ವಜನಿಕರು ಹೇಳುತ್ತಿದ್ದಾರೆ. 

Similar News