ಫೆ.5 ರಂದು ಜಾಮಿಅಃ ನೂರಿಯ್ಯಾಃ ಅರೆಬಿಕ್ ಕಾಲೇಜಿನ ವಜ್ರ ಮಹೋತ್ಸವದ ಪ್ರಚಾರ ಸಮ್ಮೇಳನ

Update: 2023-02-04 15:18 GMT

ಮಂಗಳೂರು: ದಕ್ಷಿಣ ಕನ್ನಡ ಸ್ಟೂಡೆಂಟ್ ಫೋರಮ್ (ಡಿಕೆಎಸ್‌ಎಫ್) ಹಾಗೂ ಎಸ್ಕೆಎಸೆಸ್ಸೆಫ್ ದೇರಳಕಟ್ಟೆ ಶಾಖೆಯ ಜಂಟಿ ಆಶ್ರಯದಲ್ಲಿ ಜಾಮಿಅಃ ನೂರಿಯ್ಯಾಃ ಅರೆಬಿಕ್ ಕಾಲೇಜಿನ ವಜ್ರ ಮಹೋತ್ಸವದ ಪ್ರಚಾರ ಸಮ್ಮೇಳನವು ಫೆ.5ರ ಮಗ್ರಿಬ್ ನಮಾಝ್ ಬಳಿಕ ದೇರಳಕಟ್ಟೆಯ ಸಿಟಿ ಗ್ರೌಂಡಿನಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸೈಯದ್ ಅಮೀರ್ ತಂಙಳ್, ಜಾಮಿಅಃ ಪ್ರೊಫೆಸರ್‌ಗಳಾದ ಶೈಖುನಾ ಲಿಯಾವುದ್ದೀನ್ ಫೈಝಿ, ಶೈಖುನಾ ಒಟಿ ಮುಸ್ತಫಾ ಫೈಝಿ, ಮುಜ್ತಬಾ ಫೈಝಿ ಆನಕ್ಕರ, ಅಬೂತ್ವಾಹಿರ್ ಫೈಝಿ ಚುಂಗತ್ತರ,  ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಉಸ್ಮಾನ್ ಫೈಝಿ ತೋಡಾರು ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Similar News