ಧರ್ಮಸ್ಥಳ: ಬೃಹತ್ ಪೈಪ್ ಮೈಮೇಲೆ ಬಿದ್ದು ಓರ್ವ ಮೃತ್ಯು

ಕುಡಿಯುವ ನೀರಿನ ಕಾಮಗಾರಿಗಾಗಿ ತಂದ ಪೈಪ್ ಲಾರಿಯಿಂದ ಕೆಳಗಿಳಿಸುವ ವೇಳೆ ಅವಘಡ

Update: 2023-02-05 09:49 GMT

ಬೆಳ್ತಂಗಡಿ, ಫೆ.5: ಧರ್ಮಸ್ಥಳದಲ್ಲಿ ಕುಡಿಯುವ ನೀರಿನ ಕಾಮಗಾರಿಗಾಗಿ ತಂದ ಪೈಪ್ ಲಾರಿಯಿಂದ ಇಳಿಸುವ ವೇಳೆ ಆಕಸ್ಮಿಕವಾಗಿ ಪೈಪ್ ಮೈ ಮೇಲೆ ಬಿದ್ದು ಲಾರಿ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ. ಧರ್ಮಸ್ಥಳ ಗ್ರಾಮಕ್ಕೆ ಸರಕಾರದಿಂದ ಕುಡಿಯುವ ನೀರಿನ ಕಾಮಗಾರಿ ಸರಕಾರದಿಂದ ಮಂಜೂರಾಗಿದ್ದು ಕಾಮಗಾರಿ ನಡೆಯುತ್ತಿದೆ.

ಕಾಮಗಾರಿಗಾಗಿ ತೆಲಂಗಾಣದಿಂದ ಧರ್ಮಸ್ಥಳಕ್ಕೆ ಲಾರಿಯಲ್ಲಿ ಪೈಪ್ ತರಲಾಗಿತ್ತು. ಲಾರಿಯಿಂದ ಚಾಲಕ ಪೈಪ್ ಇಳಿಸುತ್ತಿದ್ದ ಆಕಸ್ಮಿಕವಾಗಿ ಪೈಪ್ ಲಾರಿ ಚಾಲಕ ಮಧುಸೂದನ್ ರೆಡ್ಡಿ (40) ಎಂಬವರ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತದೇಹವನ್ನು ಬೆಳ್ತಂಗಡಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

Similar News