ಸರಣಿ ಅಪಘಾತ: ಬೈಕ್ ಸವಾರ ಮೃತ್ಯು

Update: 2023-02-06 15:31 GMT

ಬೆಂಗಳೂರು, ಫೆ.6: ಇಲ್ಲಿನ ನೃಪತುಂಗ ರಸ್ತೆಯ ವೃತ್ತದಲ್ಲಿ ಕಾರೊಂದು ಬೈಕ್‍ಗೆ ಢಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತ ಸಂಭವಿಸಿ, ಓರ್ವ ಮೃತಪಟ್ಟಿರುವ ಘಟನೆ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸರಣಿ ಅಪಘಾತದಲ್ಲಿ ಸಾವನ್ನಪ್ಪಿದಂತ ಬೈಕ್ ಸವಾರನನ್ನು ಮಾಜಿದ್ ಖಾನ್(39) ಎಂದು ಗುರುತಿಸಲಾಗಿದೆ. 

ಸೋಮವಾರ ಸಂಜೆ ನೃಪತುಂಗ ರಸ್ತೆಯ ನ್ಯಾಯಾಲಯದ ಮುಂಬಾಗಿಲು ಎರಡು ಕಾರು, 2 ಬೈಕ್‍ಗಳಿಗೆ ಕಾರೊಂದು ಢಿಕ್ಕಿ ಹೊಡೆದಿದೆ. ಈ ವೇಳೆ ಮಾಜಿದ್ ಖಾನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಇನ್ನೂ, ರಿಯಾಝ್ ಎಂಬುವರು ಸೇರಿದಂತೆ ನಾಲ್ವರು ಗಾಯಗೊಂಡು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೆಎ 50, ಎಂಎ 6600 ಸಂಖ್ಯೆಯ ಕಾರು ಸರಣಿ ಅಪಘಾತಕ್ಕೆ ಕಾರಣವಾಗಿದೆ. ಈ ಕಾರು ರಾಮುಸುರೇಶ್ ಎಂಬುವರ ಹೆಸರಿನಲ್ಲಿದೆ ಎನ್ನಲಾಗಿದೆ. ಕಾರಿನ ಮೇಲೆ ಮಾಜಿ ಶಾಸಕ ಎಂದು ಉಲ್ಲೇಖಿಸಲಾಗಿದೆ. ಈ ಸಂಬಂಧ ಹಲಸೂರು ಗೇಟ್ ಸಂಚಾರ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. 

Similar News