ಏಕಲವ್ಯ ಪ್ರಶಸ್ತಿ ಪುರಸ್ಕೃತ ಕೆಎಸ್ಸಾರ್ಟಿಸಿ ಚಾಲಕನ ಮಗನಿಗೆ ಸನ್ಮಾನ

Update: 2023-02-06 16:18 GMT

ಬೆಂಗಳೂರು, ಫೆ.6: ಕೆಎಸ್ಸಾರ್ಟಿಸಿ ಬಸ್ ಚಾಲಕ ಶಂಕರ್ ಎಚ್.ಟಿ. ಅವರ ಮಗ ಎಚ್.ಎಸ್.ಸಾಕ್ಷಾತ್ ಅವರಿಗೆ ರಾಜ್ಯ ಸರಕಾರವು ಏಕಲವ್ಯ ಪ್ರಶಸ್ತಿಯನ್ನು ನೀಡಿದ್ದು, ಸೋಮವಾರದಂದು ನಿಗಮದ ಕೇಂದ್ರ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಪ್ರಶಸ್ತಿ ಪುರಸ್ಕøತರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿ.ಅನ್ಬುಕುಮಾರ್, ನಿಗಮದ ಸಿಬ್ಬಂದಿಗಳ ಮಕ್ಕಳ ಮಹತ್ತರವಾದ ಸಾಧನೆಯು ನಿಜಕ್ಕೂ ಸಂತಸ  ಮತ್ತು ಹೆಮ್ಮೆಯ ವಿಷಯ. ಕ್ರೀಡಾ ಕ್ಷೇತ್ರದಲ್ಲಿ ಇಂದಿನ ಮಕ್ಕಳು ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕಾಗಿದೆ. ಕ್ರೀಡೆಯು ಶಿಸ್ತು, ಸಂಯಮ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಕಲಿಸುತ್ತದೆ. ಸಾಕ್ಷತ್ ರವರ ನಿರಂತರ ಅಭ್ಯಾಸ ಮತ್ತು ಕಠಿಣ ಪರಿಶ್ರಮದ  ಸಾಧನೆಯು  ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರುವಂತಾಗಲಿ ಎಂದು ಆಶಿಸಿದರು.

Similar News