ಜ್ಯುವೆಲ್ಲರಿ ಅಂಗಡಿಯ ಸಿಬ್ಬಂದಿ ಕೊಲೆ ಪ್ರಕರಣ: ಆರೋಪಿ ಪತ್ತೆಗೆ 7 ಪೊಲೀಸ್ ತಂಡಗಳ ರಚನೆ

Update: 2023-02-07 15:14 GMT

ಮಂಗಳೂರು: ನಗರದ ಹಂಪನಕಟ್ಟೆ-ಬಲ್ಮಠ ರಸ್ತೆಯ ಮಂಗಳೂರು ಜ್ಯುವೆಲ್ಲರಿಯಲ್ಲಿ ಮೊನ್ನೆ ನಡೆದ ಸಿಬ್ಬಂದಿಯ ಕೊಲೆ ಪ್ರಕರಣದ ಆರೋಪಿಯ ಪತ್ತೆಗಾಗಿ 7 ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಅತ್ತಾವರ ನಿವಾಸಿ ರಾಘವೇಂದ್ರ ಆಚಾರ್ಯ ಅವರನ್ನು ದುಷ್ಕರ್ಮಿಯೊಬ್ಬ ಚೂರಿಯಿಂದ ಕತ್ತು ಸೀಳಿ ಕೊಲೆ ಮಾಡಿದ್ದ. ಆರೋಪಿ ಚಹರೆಯ ಸಿಸಿಟಿವಿ ದಾಖಲೆಯನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಆರೋಪಿ ಪತ್ತೆ ಕಾರ್ಯವು ಜಟಿಲವಾದ ಕಾರಣ ನಗರದ ಅಪರಾಧ ಪತ್ತೆ ದಳ (ಸಿಸಿಬಿ), ದಕ್ಷಿಣ ಉಪ ವಿಭಾಗ, ಉತ್ತರ ಉಪವಿಭಾಗ, ಕೇಂದ್ರ ಉಪವಿಭಾಗ ಸಹಿತ 7 ತಂಡಗಳನ್ನು ರಚಿಸಲಾಗಿದೆ.

ಇದನ್ನೂ ಓದಿ: ವಿಷಾಹಾರ ಸೇವನೆ - ಸಿಟಿ ಆಸ್ಪತ್ರೆ ಮತ್ತು ಹಾಸ್ಟೆಲ್‌ನ ಆಡಳಿತ ಮಂಡಳಿಯ ನಿರ್ಲಕ್ಷ್ಯದ ವಿರುದ್ಧ ಪ್ರಕರಣ ದಾಖಲು

Similar News