ಬೆಂಗಳೂರು: ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಆರೋಪಿಯ ಬಂಧನ

Update: 2023-02-07 17:35 GMT

ಬೆಂಗಳೂರು, ಫೆ.7: ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ದುಷ್ಕರ್ಮಿಗಳಿಗೆ ಪಿಸ್ತೂಲುಗಳನ್ನು ಸರಬರಾಜು ಮಾಡುತ್ತಿರುವ ಜಾಲವನ್ನು ಬೇಧಿಸಿರುವ ಸಿಸಿಬಿ ಪೊಲೀಸರು ಓರ್ವನನ್ನು ಬಂಧಿಸಿ 10 ನಾಡಪಿಸ್ತೂಲು ಹಾಗೂ 10 ಜೀವಂತ ಗುಂಡುಗಳನ್ನು ಜಪ್ತಿ ಮಾಡಿದ್ದಾರೆ.

ಮಹಾರಾಷ್ಟ್ರದ ನಾಗ್ಪುರದ ರೋಹನ್ ಬನ್ಸಾಲ್ ಗಾಯಕ್ವಾಡ್ (40) ಬಂಧಿತ ಆರೋಪಿಯಾಗಿದ್ದಾನೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ. ಎಸ್.ಡಿ ಶರಣಪ್ಪ ಹೇಳಿದ್ದಾರೆ.

ಆರೋಪಿಯು ಬೇರೆ ಬೇರೆ ರಾಜ್ಯಗಳಿಗೆ ಪಿಸ್ತೂಲುಗಳನ್ನು ಸರಬರಾಜು ಮಾಡಿರುವ ಹಾಗೂ ಆತನೊಂದಿಗೆ ಕೃತ್ಯದಲ್ಲಿ ಭಾಗಿಯಾಗಿರುವ ಸಹಚರರ ಪತ್ತೆಗೆ ಶೋಧಕಾರ್ಯ ನಡೆಸಲಾಗಿದೆ ಎಂದೂ ಅವರು ಹೇಳಿದರು.

ಬಂಧಿತ ಆರೋಪಿಯ ವಿರುದ್ಧ ಮಹಾರಾಷ್ಟ್ರದ ವಾಡಿ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆಯತ್ನ, 2 ಕಳ್ಳತನ ಪ್ರಕರಣಗಳು ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Similar News