ಬೆಳ್ತಂಗಡಿ: ರಸ್ತೆ ಅಪಘಾತದ ಗಾಯಾಳು ಯುವಕ ಮೃತ್ಯು

Update: 2023-02-08 08:40 GMT

ಬೆಳ್ತಂಗಡಿ, ಫೆ.8: ಕೊಕ್ಕಡದಲ್ಲಿ ಟಿಪ್ಪರ್ ಢಿಕ್ಕಿ (Accident) ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದು ವರದಿಯಾಗಿದೆ.

ಕೊಕ್ಕಡ ನಿವಾಸಿ ಸಿರಾಜ್ ಮೃತಪಟ್ಟ ಯುವಕ.

ನಾಲ್ಕು ದಿನಗಳ ಹಿಂದೆ ಕೊಕ್ಕಡದಲ್ಲಿ ಸಿರಾಜ್ ಚಲಾಯಿಸುತ್ತಿದ್ದ ಬೈಕಿಗೆ ಮರಳು ಸಾಗಾಟದ ಟಿಪ್ಪರ್ ಢಿಕ್ಕಿಹೊಡೆದಿತ್ತು. ಇದರಿಂದ ರಸ್ತೆಗೆಸೆಲ್ಪಟ್ಟ ಸಿರಾಜ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮಂಗಳವಾರ ಕೊನೆಯುಸಿರೆಳೆದಿದ್ದಾರೆ.

ಘಟನೆಯ ಬಗ್ಗೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News