ಬೆಂಗಳೂರು: ಸಾಲದ ಹಣ ವಾಪಸ್ಸು ಕೇಳಿದಕ್ಕೆ ಯುವಕನ ಕೊಲೆ

Update: 2023-02-08 12:39 GMT

ಬೆಂಗಳೂರು, ಫೆ.7: ಸಾಲ ವಾಪಸ್ಸು ಕೇಳಿದ ಲೇವಾದೇವಿ(ಫೈನಾನ್ಸ್) ದಾರನಿಗೆ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಬಾಣಸವಾಡಿ ಸುತ್ತಮುತ್ತ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಶೇಖರ್ (29) ಕೊಲೆಯಾದವರು ಎಂದು ಗುರುತಿಸಲಾಗಿದೆ.

ವ್ಯವಹಾರದ ವೇಳೆ ಶೇಖರ್ ಇತ್ತೀಚೆಗೆ ಮನೋಜ್‍ನಿಗೆ ಹಣ ನೀಡಿದ್ದು, ತಡರಾತ್ರಿ ಮದ್ಯದ ಅಮಲಿನಲ್ಲಿ ಮನೋಜ್ ಬಳಿ ಕೊಟ್ಟ ಹಣ ವಾಪಸ್ಸು ಕೊಡುವಂತೆ ಶೇಖರ್ ಕೇಳಿದ್ದಾನೆ. ಸ್ನೇಹಿತರ ಜತೆ ಬಂದಿದ್ದ ಮನೋಜ್ ಸಾಲ ವಾಪಸ್ಸು ಕೊಡುವುದಿಲ್ಲ ಎಂದು ಜಗಳವಾಡಿದ್ದಾನೆ. ಈ ವೇಳೆ ಮನೋಜ್ ಹಾಗೂ ಆತನ ಸ್ನೇಹಿತರು ಶೇಖರ್‍ನ ಹೊಟ್ಟೆ ಭಾಗಕ್ಕೆ ಮೂರ್ನಾಲ್ಕು ಕಡೆಗಳಲ್ಲಿ ಚಾಕು ಇರಿದಿದ್ದಾರೆ ಎನ್ನಲಾಗಿದೆ.

ತೀವ್ರ ರಕ್ತಸ್ರಾವದಿಂದ ಶೇಖರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿಬ್ರಾಹ್ಮಣರ ಕುರಿತ ಹೇಳಿಕೆ: ಕುಮಾರಸ್ವಾಮಿಯನ್ನು ತಡೆದು ಸ್ಪಷ್ಟನೆಗೆ ಆಗ್ರಹಿಸಿದ ಅರ್ಚಕ

Similar News