ಫೆ.12 ರಂದು ಹಾಜಿರಾ ಹಸನ್ ಮಸೀದಿ ಮತ್ತು ಸುಳ್ಯ ಕಮ್ಯುನಿಟಿ ಸೆಂಟರ್ ಉದ್ಘಾಟನೆ

Update: 2023-02-09 15:57 GMT

ಮಂಗಳೂರು: ಸುಳ್ಯ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (SECT) ವತಿಯಿಂದ ಫೆ.12 ರ ರವಿವಾರದಂದು ಹಾಜಿರಾ ಹಸನ್ ಮಸೀದಿ ಮತ್ತು ಸುಳ್ಯ ಕಮ್ಯುನಿಟಿ ಸೆಂಟರ್ ನ ಉದ್ಘಾಟನಾ ಸಮಾರಂಭ ನಡೆಯಲಿದೆ.

ಮಸೀದಿ ಮತ್ತು ಕಮ್ಯುನಿಟಿ ಸೆಂಟರ್ ಅನ್ನು ರವಿವಾರ ಬೆಳಗ್ಗೆ 9.30 ಕ್ಕೆ ಅಲ್ ಖೋಬರ್‌ನ ವಾಣಿಜ್ಯೋದ್ಯಮಿ ಮತ್ತು ಟೀಮ್ ಬಿ-ಹ್ಯೂಮನ್ ಟ್ರಸ್ಟಿ ಮುಹಮ್ಮದ್ ಯೂನುಸ್ ಹಸನ್ ಉದ್ಘಾಟಿಸಲಿದ್ದಾರೆ ಎಂದು SECT ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

JIHನ ಪ್ರಧಾನ ಕಾರ್ಯದರ್ಶಿ ಟಿ. ಆರಿಫ್ ಅಲಿ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆಯಲಿದೆ. ಮಂಗಳೂರಿನ ಕಚ್ಚಿ ಮೆಮನ್ ಮಸೀದಿ ಖತೀಬ್ ಮೌಲಾನಾ ಶೋಯೆಬ್ ಹುಸೈನಿ ನದ್ವಿ, ಖತೀಬ್, ಮಸ್ಜಿದುಲ್ ಹುದಾ ಖತೀಬ್ ಮುಹಮ್ಮದ್ ಕುಂಞಿ, ಶಾಂತಿ ನಗರ ಜುಮಾ ಮಸೀದಿ ಖತೀಬ್ ಹುಸೈನ್ ಕಾಮಿಲ್ ಸಖಾಫಿ, ಬೋಳಂಗಡಿ ಹವ್ವ ಜುಮಾ ಮಸೀದಿ ಖತೀಬ್  ಮೌಲಾನಾ ಯಹ್ಯಾ ತಂಙಳ್ ಮದನಿ, ಸಚಿವ ಎಸ್ ಅಂಗಾರ, ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಸೌದಿ ಅರೇಬಿಯಾದ ಅಲ್ ಮುಝೈನ್ ಮಾಲಕ ಮತ್ತು ಹಿದಾಯ ಫೌಂಡೇಶನ್ ಟ್ರಸ್ಟಿ ಝಕರಿಯಾ ಜೋಕಟ್ಟೆ, ಟೀಮ್ ಬಿ-ಹ್ಯೂಮನ್ ಟ್ರಸ್ಟಿ ಹಾಗೂ ವೈಟ್‌ಸ್ಟೋನ್ ಗ್ರೂಪ್ ನ ಎಂ ಶರೀಫ್ ಬೋಲಾರ್, ಸುಳ್ಯ ಪಟ್ಟಣ ಪಂಚಾಯತ್ ಅಧ್ಯಕ್ಷರಾದ  ವಿನಯ್ ಕುಮಾರ್ ಕುಂಡಡ್ಕ, ಮತ್ತು ಜೆಡಿಎಸ್ ಕರ್ನಾಟಕ ರಾಜ್ಯ ವಕ್ತಾರರಾದ ಎಂ ಬಿ ಸದಾಶಿವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸುಳ್ಯ ಪಟ್ಟಣ ಪಂಚಾಯತ್‌ನ ಸದಸ್ಯರಾದ ರಿಯಾಝ್ ಕಟ್ಟೆಕಾರ್, ಸುಶೀಲಾ ಚನ್ನಪ್ಪ ಮತ್ತು ಶರೀಫ್,  ಎಕ್ಸ್‌ಪರ್ಟೈಸ್ ಸಮೂಹ ಸಂಸ್ಥೆಯ MD ಶೇಕ್ ಕರ್ನಿರೆ, ಆಝಾದ್ ಗ್ರೂಪ್ ನ MD ಮತ್ತು ಹಿದಾಯ ಫೌಂಡೇಶನ್ ಅಧ್ಯಕ್ಷರಾದ ಮನ್ಸೂರ್ ಆಝಾದ್, ಹಿದಾಯ ಫೌಂಡೇಶನ್ ಉಪಾಧ್ಯಕ್ಷ, ಬಾವಾ ಗ್ರೂಪ್ ನ ರಿಯಾಝ್ ಬಾವಾ, ತರೀಕೆರೆ ಪುರಸಭೆ ಮಾಜಿ ಅಧ್ಯಕ್ಷ ಎಚ್‌ ಯು ಫಾರೂಕ್‌ ತರೀಕೆರೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ; ಶಾಹುಲ್ ಹಮೀದ್ ಉಜಿರೆ, ಹನೀಫ್ ಗೋಳ್ತಮಜಲ್, ಮೊಹಮ್ಮದ್ ಬಶೀರ್,  ಇಬ್ರಾಹಿಂ ಬೈಕಂಪಾಡಿ, ಕೆ ಅಹ್ಮದ್ ಬಾವಾ, ಅಬ್ದುಲ್ ಸಲಾಂ, ಇಬ್ರಾಹಿಂ ಎಂ ಹುಸೇನ್, ಮಹಮ್ಮದ್ ವಝೀರ್, ಸಲ್ಮಾನ್ ನೂರ್ ಹಸನ್, H K ಕಾಸಿಂ ಅಹಮದ್, ಅಶ್ಕಫ್ ಅಬ್ದುಲ್ ಹಮೀದ್, ಡಾ. ಅಬ್ದುಲ್ ಮಜೀದ್ ಯು, ಎಸ್ ಇ ಮೊಹಮ್ಮದ್ ಕುಂಞಿ, ಮುಹಮ್ಮದ್ ಅಲಿ, ಇಬ್ರಾಹಿಂ ಗೂನಡ್ಕ, ಅಬ್ದುಲ್ಲಾ ಪಿ ಎಂ, ಅಬ್ಬಾಸ್ ಬಿ, ಡಾ.ಉಮರ್ ಬೀಜದಕಟ್ಟೆ, ಅಬ್ದುಲ್ ರಝಾಕ್ ಕೆ ಸಿ, ಮಹಮ್ಮದ್ ನೂರುಲ್ಲಾ, ಕೆ ಎಂ ಶರೀಫ್, ಅಬ್ದುಸ್ಸಲಾಂ ಯು, ಆಸಿಫ್ ಡೀಲ್ಸ್, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Similar News