ವಿಟ್ಲ: ಕಂಬಳಬೆಟ್ಟು ದರ್ಗಾ ಶರೀಫ್ ಉರೂಸ್ ಗೆ ಚಾಲನೆ

Update: 2023-02-11 08:13 GMT

ವಿಟ್ಲ: ಕಂಬಳಬೆಟ್ಟು ವಲಿಯುಲ್ಲಾಯಿ ಮಶ್ ಹೂರ್ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮ ಮತ್ತು ಸ್ವಲಾತ್ ವಾರ್ಷಿಕ ಹಾಗೂ ದ್ಸಿಕ್ರ್ ಮಜ್ಲಿಸ್ ಗೆ ಚಾಲನೆ ನೀಡಲಾಯಿತು.

ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ದುಆಃ ಮೂಲಕ ಚಾಲನೆ ನೀಡಿದರು. ಕಂಬಳಬೆಟ್ಟು ಮುದರ್ರಿಸ್ ಜಿ.ಇಬ್ರಾಹಿಂ ಮದನಿ ಮುದರ್ರಿಸ್ ಕಂಬಳಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಅಸ್ಸಯ್ಯದ್ ಸುಹೈಲ್ ಅಸ್ಸಖಾಫ್ ಸಖಾಫಿ ಮಡಕ್ಕರ ತಂಙಳ್ ಕಣ್ಣೂರು, ಕೇರಳ ಅವರು ಮುಖ್ಯ ಪ್ರಭಾಷಣ ಮಾಡಿದರು. ಮಸೀದಿ ಖತೀಬು ಜಿ. ಇಬ್ರಾಹಿಂ ಮದನಿ ದರ್ಗಾ ಝಿಯಾರತ್ ನೆರವೇರಿಸಿದರು.

ಸದರ್ ಮುಅಲ್ಲಿಂಗಳಾದ ಮುಹಮ್ಮದ್ ಹನೀಫ್ ಸಖಾಫಿ , ಮುಹಮ್ಮದ್ ಹಾರಿಸ್ ಮದನಿ, ಝಕರಿಯಾ ಸಖಾಫಿ ಕಂಬಳಬೆಟ್ಟು, ಅಶ್ರಫ್ ಮುಸ್ಲಿಯಾರ್, ಕಂಬಳಬೆಟ್ಟು, ಮುಹಮ್ಮದ್ ಹನೀಫ್ ಸಅದಿ, ಅಬ್ದುಲ್ ರಹೀಂ ಸಖಾಫಿ ಹುದಾ, ಎಂ ಎಸ್ ಶರೀಫ್ ಮದನಿ, ಬದ್ರುದ್ದೀನ್ ಮದನಿ ಶಾಂತಿನಗರ, ಉರೂಸ್ ಕಮಿಟಿ ಅಧ್ಯಕ್ಷ ಅಬ್ದುಲ್ ರಝಾಕ್, ಉಪಾಧ್ಯಕ್ಷ ಹಸೈನಾರ್ ಕೊಳಂಬೆ, ಕಾರ್ಯದರ್ಶಿ ನಾಸಿರ್ ಅಲಾದಿನಗರ, ಜಮಾಅತ್ ಸಮಿತಿ ಅಧ್ಯಕ್ಷ ಮೊಯಿದು ಹಾಜಿ, ಕಾರ್ಯದರ್ಶಿ ಅಬ್ದುಲ್ ಖಾದರ್ ಬದ್ರಿಯಾ, ಸದಸ್ಯರಾದ ಹಮೀದ್, ಎಸ್ ಕೆ ಮೊಹಮ್ಮದ್, ಪಟ್ಟಣ ಪಂಚಾಯಿತಿ ಸದಸ್ಯ ವಿಕೆಎಂ ಅಶ್ರಪ್, ಪ್ರಮುಖರಾದ ಅಬೂಬಕರ್ ಕೆಸಿಎಫ್ ಉಪಸ್ಥಿತರಿದ್ದರು.

Similar News