ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಶನ್ ವತಿಯಿಂದ ಡ್ರಗ್ಸ್ ವಿರುದ್ಧ ಜಾಗೃತಿ ಕಾರ್ಯಕ್ರಮ

Update: 2023-02-23 07:50 GMT

ಮಂಗಳೂರು: ಕರ್ನಾಟಕ ಸಲಫಿ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಿದಾಯತ್ ನಗರದಲ್ಲಿ ಇತ್ತೀಚೆಗೆ ಡ್ರಗ್ಸ್ ವಿರುದ್ಧ ಜಾಗೃತಿ, ಪ್ರವಚನ ಕಾರ್ಯಕ್ರಮ ನಡೆಯಿತು.

ಇಂದಿನ ಯುವಜನತ ಮಾದಕ ದ್ರವ್ಯಗಳ ದಾಸರಾಗುತ್ತಿರುವುದರ ಬಗ್ಗೆ, ಅದರಿಂದ ಮುಕ್ತರಾಗಲಿರುವ ಪರಿಹಾರದ ಕುರಿತು ವಿವರಿಸಿ, ಈ ಬಗ್ಗೆ ಪೋಷಕರು ಜಾಗೃತರಾಗಬೇಕಾದ ಅನಿವಾರ್ಯತೆ ಬಗ್ಗೆ ಮೌಲವಿ ಶಿಹಾಬ್ ಎಡಕ್ಕರ ಅವರು ಮಾಹಿತಿ ನೀಡಿದರು.

ಅಲ್ ಬಯಾನ್ ಅರಬಿಕ್ ಕಾಲೇಜಿನ ಪ್ರಾಧ್ಯಾಪಕ ಡಾ. ತ್ವಾರೀಖ್ ಸಫೀವುರ್ರಹ್ಮನ್ ಮುಬಾರಕ್‌ಪುರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಇಹಪರ ವಿಜಯಕ್ಕಾಗಿ ಕುರ್‌ಆನ್ ನ ಸಂದೇಶ ಸಹಕಾರಿಯಾಗಿದೆ ಎಂದರು.

ವೇದಿಕೆಯಲ್ಲಿ ಶಾಕಿರ್ ಉಳ್ಳಾಲ್, ಅಬ್ದುರ್ರಹ್ಮಾನ್ ಉಳ್ಳಾಲ್, ಮೊಹಿದ್ದೀನ್ ಉಚ್ಚಿಲ್, ಇಜಾಝ್ ಸ್ವಲಾಹಿ ಉಪಸ್ಥಿತರಿದ್ದರು. ಅಹ್ಮದ್ ಎಸ್.ಎಂ ಸ್ವಾಗತಿಸಿ, ಖಲೀಲ್ ತಲಪಾಡಿ ಧನ್ಯವಾದಗೈದರು.

Similar News