ವಾರ್ತಾಭಾರತಿ ಕಚೇರಿಗೆ ಭೇಟಿ ನೀಡಿದ ಡಾ. ರೊನಾಲ್ಡ್ ಕೊಲಾಸೊ

Update: 2023-02-24 18:16 GMT

ಮಂಗಳೂರು: ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಡಾ.ರೊನಾಲ್ಡ್ ಕೊಲಾಸೊ ಮಂಗಳೂರಿನ ವೆಲೆನ್ಸಿಯಾದಲ್ಲಿರುವ ‘ವಾರ್ತಾಭಾರತಿ’ ಕಚೇರಿಗೆ ಶುಕ್ರವಾರ ಭೇಟಿ ನೀಡಿದರು. ಅವರನ್ನು ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಸ್ವಾಗತಿಸಿದರು.

ಈ ವೇಳೆ ಪತ್ರಿಕಾ ಬಳಗವನ್ನುದ್ದೇಶಿಸಿ ಮಾತನಾಡಿದ ಡಾ.ಕೊಲಾಸೊ, ‘‘ತಾಯ್ನಾಡಿನ ಹಾಗೂ ಸುತ್ತಮುತ್ತಲಿನ ಸುದ್ದಿಯನ್ನು ತಿಳಿಯಲು ನಾನು ಪ್ರತಿದಿನ ‘ವಾರ್ತಾಭಾರತಿ’ಯನ್ನು ಓದುತ್ತೇನೆ. ಇದೇ ರೀತಿ ಯಶಸ್ವಿಯಾಗಿ ಪತ್ರಿಕೆ ಮುಂದುವರಿಯಲಿ. ಇದು ರಾಜ್ಯಕ್ಕೆ ಮಾತ್ರ ಸೀಮಿತವಾಗಿರದೆ ದೇಶ ವಿದೇಶಗಳಲ್ಲಿ  ನೆಲೆಸಿರುವ ಸಮಸ್ತ ಕನ್ನಡಿಗರ ಬಳಿ ತಲುಪಲಿ’’ ಎಂದು ಹಾರೈಸಿದರು.

ಈ ಸಂದರ್ಭ ಮಾಜಿ ಶಾಸಕ ಜೆ.ಆರ್.ಲೋಬೊ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಇಫ್ತಿಕಾರ್ ಅಲಿ, ಡೆನ್ನಿಸ್ ಡಿಸಿಲ್ವ, ಉಪಸ್ಥಿತರಿದ್ದರು.  ‘ವಾರ್ತಾಭಾರತಿ’ ಮಂಗಳೂರು ಬ್ಯೂರೊ ಮುಖ್ಯಸ್ಥ ಪುಷ್ಪರಾಜ್ ಬಿ.ಎನ್. ಪತ್ರಿಕಾ ಬಳಗದ ಪರವಾಗಿ ಡಾ.ಕೊಲಾಸೊರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

Similar News