ಎಣ್ಮೂರು: ಎಂವೈಎಸ್ನಿಂದ ತಾಜುಲ್ ಉಲಮಾ, ಶಂಸುಲ್ ಉಲಮಾ ಅನುಸ್ಮರಣಾ, ಬಡ ಯುವತಿಯ ವಿವಾಹ ಕಾರ್ಯಕ್ರಮ
ಪಂಜ, ಫೆ.28: ರಹ್ಮಾನಿಯ ಕೇಂದ್ರ ಜುಮಾ ಮಸ್ಜಿದ್ ಎಣ್ಮೂರು ಐವತ್ತೊಕ್ಲು ಇದರ ಅಧೀನದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡ ಯುವ ಸಂಘಟನೆಯಾದ ಮುಸ್ಲಿಂ ಯುವಜನ ಸಂಘ (ಎಂವೈಎಸ್) ಎಣ್ಮೂರು ಇದರ ವತಿಯಿಂದತಾಜುಲ್ ಉಲಮಾ, ಶಂಸುಲ್ ಉಲಮಾ ಹಾಗೂ ಅಗಲಿದ ಇನ್ನಿತರ ಉಲಮಾಗಳ ಅನುಸ್ಮರಣಾ ಹಾಗೂ ಜಮಾಅತ್ನ ಬಡ ಯುವತಿಯ ವಿವಾಹ ಕಾರ್ಯಕ್ರಮ ಇತ್ತೀಚೆಗೆ ರಹ್ಮಾನಿಯ ಕೇಂದ್ರ ಜುಮಾ ಮಸೀದಿಯ ಸಫಾ ಅಡಿಟೋರಿಯಂನಲ್ಲಿ ನಡೆಯಿತು.
ಅನುಸ್ಮರಣಾ ಕಾರ್ಯಕ್ರಮವನ್ನು ಸ್ಥಳೀಯ ಖತೀಬ್ ಅಲ್ಹಾಜ್ ಅಬ್ದುಲ್ಲ ಮದನಿ ಉದ್ಘಾಟಿಸಿದರು. ಎಣ್ಮೂರು-ಮುಚ್ಚಿಲ ರಿಫಾಯಿಯ್ಯ ಜುಮಾ ಮಸ್ಜಿದ್ ಮುದರ್ರಿಸ್ ಅಬ್ದುಲ್ ಹಮೀದ್ ಅಹ್ಸನಿ ಅಲ್ ಅಫ್ಳಳಿ ಅನುಸ್ಮರಣಾ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಎಣ್ಮೂರು-ಐವತ್ತೊಕ್ಲು ರಹ್ಮಾನಿಯ ಕೇಂದ್ರ ಜುಮಾ ಮಸ್ಜಿದ್ನ ಅಧ್ಯಕ್ಷ ಟಿ.ಎಸ್.ಸುಲೈಮಾನ್, ಅತ್ತಿಕರಮಜಲು ಬದ್ರಿಯಾ ಜುಮಾ ಮಸ್ಜಿದ್ನ ಅಧ್ಯಕ್ಷ ಹಾಜಿ. ಪಿ.ಇಸಾಕ್ ಸಾಹೇಬ್ ಪಾಜಪಳ್ಳ, ಕಜೆ-ನಿಂತಿಕ್ಕಲ್ ಬದ್ರಿಯಾ ಜುಮ್ಮಾ ಮಸ್ಜಿದ್ನ ಅಧ್ಯಕ್ಷ ಅಬ್ದುಲ್ ಗಫೂರ್ ಕಲ್ಮಡ್ಕ, ಮುಚ್ಚಿಲ ಮುನವ್ವಿರುಲ್ ಇಸ್ಲಾಂ ಮದರಸದ ಸದರ್ ಮುಅಲ್ಲಿಂ ಅಬ್ದುರ್ರಝಾಕ್ ಹಿಮಾಮಿ, ಮುಅಲ್ಲಿಂಗಳಾದ ಅಬೂಬಕರ್ ಸಅದಿ, ಅಬ್ದುಲ್ ಅಝೀಝ್ ಮುಸ್ಲಿಯಾರ್, ಎಣ್ಮೂರು-ಐವತ್ತೊಕ್ಲು ರಹ್ಮಾನಿಯ ಕೇಂದ್ರ ಜುಮಾ ಮಸ್ಜಿದ್ನ ಮುಅದ್ಸಿನ್ ಶಂಸುದ್ದೀನ್ ಫಾರೂಕಿ ಉಪಸ್ಥಿತರಿದ್ದರು.
ಮುಸ್ಲಿಂ ಯುವಜನ ಸಂಘ ಎಣ್ಮೂರು ಇದರ ಅಧ್ಯಕ್ಷ ರಫೀಕ್ ಐವತ್ತೊಕ್ಲು ಸ್ವಾಗತಿಸಿದರು. ಕಾರ್ಯದರ್ಶಿ ಇಸ್ಮಾಯೀಲ್ ಗೋಲ್ಡ್ ವಂದಿಸಿದರು.
ಬಡ ಹೆಣ್ಣುಮಗಳ ವಿವಾಹ: ಕಳೆದ 5 ವರ್ಷಗಳಿಂದ ಜಮಾಅತ್ನ ವ್ಯಾಪ್ತಿಯಲ್ಲಿರುವ ಅನಾಥ ಅಥವಾ ಬಡ ಹೆಣ್ಣುಮಕ್ಕಳ ವಿವಾಹ ಕಾರ್ಯಕ್ರಮವನ್ನು ಮುಸ್ಲಿಂ ಯುವಜನ ಸಂಘದ ವತಿಯಿಂದ ನಡೆಸಿಕೊಂಡು ಬರುತ್ತಿದೆ. ಅದರಂತೆ ಈ ವರ್ಷವೂ ಜಮಾಅತ್ನ ಬಡ ಯುವತಿಯ ವಿವಾಹವನ್ನು ನಡೆಸಿಕೊಡಲಾಯಿತು.