ತಾಜುಲ್ ಉಲಮಾ ರಿಲೀಫ್ ಮತ್ತು ಚಾರಿಟೇಬಲ್ ಟ್ರಸ್ಟ್ ನಿಂದ ಮನೆ ಹಸ್ತಾಂತರ

Update: 2023-03-12 13:51 GMT

ಬಂಟ್ವಾಳ: ತಾಜುಲ್ ಉಲಮಾ ರಿಲೀಫ್ ಮತ್ತು ಚಾರಿಟಬಲ್ ಟ್ರಸ್ಟ್ (ರಿ) ದಕ್ಷಿಣ ಕನ್ನಡ ಇದರ ಅಧೀನದಲ್ಲಿ, "ವಿಧವೆಗೊಂದು ಮನೆ" ಅಭಿಯಾನದಡಿ ಪ್ರೊಜೆಕ್ಟ್ 4, ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಬೊಲ್ಪಾದೆ ಎಂಬಲ್ಲಿ ನಿರ್ಮಿಸಿದ "ತಾಜುಲ್ ಉಲಮಾ ಮಂಝಿಲ್" ಮನೆಯನ್ನು ಫಲಾನುಭವಿ ವಿಧವೆಗೆ ಹಸ್ತಾಂತರಿಸುವ ಕಾರ್ಯಕ್ರಮ ರವಿವಾರ ನಡೆಯಿತು. 

ಸಯ್ಯಿದ್ ಶಿಹಾಬುದ್ದೀನ್ ತಂಙಲ್ ಮದಕ ಹಾಗೂ ಶೈಖುನಾ ವಾಲೆಮುಂಡೋವು ಉಸ್ತಾದ್ ಮನೆಯನ್ನು ಉದ್ಘಾಟಿಸಿ, ಹಸ್ತಾಂತರಿಸಿದರು. ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಲ್ ಕಾಜೂರು ದುಆ ನೇತೃತ್ವ ನೀಡಿದರು.

ಮಸೂದ್ ಸಅದಿ ಕುಲಾಲ್ ಜಲಾಲಿಯ ಮಜ್ಲಿಸಿಗೆ ನೇತೃತ್ವ ವಹಿಸಿದರು. ಮುಹಮ್ಮದ್ ಶರೀಫ್ ಮದನಿ ಪಾಂಡವರಕಲ್ಲು ಪ್ರಾಸ್ತಾವಿಕ ಭಾಷಣ ಮಾಡಿದರು.

ಕಾರ್ಯ್ರಮದಲ್ಲಿ, ಬಂಡಮುಗೇರು ಮಸೀದಿ ಖತೀಬರಾದ ಇಬ್ರಾಹಿಂ ಆಮಾನಿ, ಕಾಯರಡ್ಕ ಖತೀಬರಾದ ಅಬ್ದುಲ್ ರಝಾಕ್ ಅಮ್ಜದಿ, ಟ್ರಸ್ಟ್ ಅಧ್ಯಕ್ಷರಾದ ಮುಹಮ್ಮದ್ ಇಕ್ಬಾಲ್ ವಗ್ಗ, ಟ್ರಸ್ಟಿಗಳಾದ ಮುಹಮ್ಮದ್ ಇಲ್ಯಾಸ್ ಕುಲಾಲ್, ಕಾರ್ಯದರ್ಶಿ ರಾಝಿಕ್,  ಸೇರಿದಂತೆ ಹಲವಾರು ನಾಯಕರು ಹಾಗೂ ದಾನಿಗಳು ಉಪಸ್ಥಿತರಿದ್ದರು.

ಹಬೀಬುರ್ರಹ್ಮಾನ್ ಜೌಹರಿ ಕಾರ್ಯಕ್ರಮ ನಿರೂಪಿಸಿದರು.

Similar News