ಉಳ್ಳಾಲ: ಅಹ್ಲನ್ ರಂಝಾನ್ ಸಾರ್ವಜನಿಕ ಸಮಾರಂಭ

Update: 2023-03-19 06:47 GMT

ಉಳ್ಳಾಲ: ಪಟ್ಟಿಕ್ಕಾಡ್ ಜಾಮಿಅಃ ನೂರಿಯಃ ಅರಬಿಯಃ ಅಧೀನ ದ ಸಯ್ಯಿದ್ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ರ ನಾಮಧೇಯ ದಲ್ಲಿ ಕಾರ್ಯಾಚರಿಸುತ್ತಿರುವ ನ್ಯಾಷನಲ್ ಮಿಷನ್ ಕರ್ನಾಟಕ  ಇದರ ಆಶ್ರಯದಲ್ಲಿ  ಶೈಕ್ಷಣಿಕ ಕಾರ್ಯಕ್ರಮದ ಪ್ರಚಾರಾರ್ಥ   ಅಹ್ಲನ್ ರಂಝಾನ್ ಸಾರ್ವಜನಿಕ ಸಮಾರಂಭವು ಉಳ್ಳಾಲ ದ ಹಝ್ರತ್ ಶಾಲಾ ಮೈದಾನದಲ್ಲಿ ನಡೆಯಿತು.

ಸೆಯ್ಯದ್ ಹುಸೈನ್ ಬಾ ಅಲವಿ ತಂಙಳ್ ಕುಕ್ಕಾಜೆ ದುಆ ನೆರವೇರಿಸಿದರು. ಸಿಂಸಾರುಲ್ ಹಕ್ ಹುದವಿ ಅಬೂದಾಬಿ ಮುಖ್ಯ ಭಾಷಣ ಮಾಡಿ, ರಂಜಾನ್ ಉಪವಾಸ ದಲ್ಲಿ ಪಾಲಿಸಬೇಕಾದ ನಿಯಮಗಳು , ಕಡ್ಡಾಯ ಕಾರ್ಯ ಗಳ ಬಗ್ಗೆ ವಿವರಿಸಿದರು.

ಸೆಯ್ಯದ್ ಆಲವಿ ತಂಙಳ್ ಫೈಝಿ ಮಲಪ್ಪುರಂ ವಿಚಾರ ಮಂಡಿಸಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಉಸ್ಮಾನ್ ಫೈಝಿ ತೋಡಾರ್,ಅಬ್ದುಲ್ ಖಾದರ್ ಅಲ್ ಖಾಸಿಮಿ ಉಸ್ತಾದ್ ಬಂಬ್ರಾಣ ,ಇಬ್ರಾಹಿಂ ಬಾಖವಿ ಕೆಸಿರೋಡ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಸೆಯ್ಯದ್ ಕೋಯ ತಂಙಳ್, ಹೈದರ್ ದಾರಿಮಿ, ಸದಕತುಲ್ಲಾ ಫೈಝಿ, ಇರ್ಶಾದ್ ದಾರಿಮಿ, ಹೈದರ್ ದಾರಿಮಿ ಕರಾಯ, ಇಸ್ಮಾಯಿಲ್ ಹಾಜಿ, ಯು.ಟಿ.ಮಹಮ್ಮದ್ ಹಾಜಿ, ಎಂ.ಎಚ್ ಮೊಯ್ದಿನ್ ಹಾಜಿ ಅಡ್ಡೂರು ಹಮೀದ್ ಕೋಡಿ, ಇಸ್ಹಾಕ್ ಹಾಜಿ ತೋಡಾರ್, ದರ್ಗಾ ನಿಕಟಪೂರ್ವ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ , ಸಿತಾರ್ ಮಜೀದ್ ಹಾಜಿ, ಅಬ್ದುಲ್ ರಹಿಮಾನ್,  ಉದ್ಯಮಿ ಬಾವಾ ಹಾಜಿ ಆಝಾದ್ ನಗರ, ರಫೀಕ್ ‌ಹಾಜಿ ಕೊಡಾಜೆ , ರಶೀದ್ ಹಾಜಿ ಪರ್ಲಡ್ಕ,
ಫಾರೂಕ್ ಉಳ್ಳಾಲ, ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕಿನ್ಯ, ಅಬ್ದುಲ್ ಖಾದರ್ ಮಾಸ್ಟರ್ ಬಂಟ್ವಾಳ, ಎಂ ಎಚ್ ಮೊಯ್ದಿನ್ ಹಾಜಿ, ಉಸ್ಮಾನ್ ತೋಡಾರ್, ಅಬೂಸಾಲಿ ಫೈಝಿ, ಇಸ್ಮಾಯಿಲ್ ತಂಙಳ್  , ಅಬ್ದುಲ್ ಖಾದರ್ ಕಾಯಿಞಿ ಹಾಜಿ ಕಿನ್ಯ, ಸಲೀಂ ಹಂಡೇಲು, ನಝೀರ್ ಫೈಝಿ ತೋಡಾರ್, 
ಸ್ವಾಗತ ಸಮಿತಿ ಅಧ್ಯಕ್ಷ ನಝೀರ್ ಉಳ್ಳಾಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Similar News