ಮೊಗವೀರ ಸಮಾಜವನ್ನು ಪ.ಪಂಗಡಕ್ಕೆ ಸೇರ್ಪಡೆಗೊಳಿಸಿ: ಕೇಂದ್ರ ಸಚಿವ ರೂಪಾಲರಿಗೆ ಮೊಗವೀರರ ಮನವಿ

Update: 2023-03-19 16:02 GMT

ಉಚ್ಚಿಲ (ಪಡುಬಿದ್ರಿ), ಮಾ.19:  ಮೊಗವೀರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಇಂದು ಅಪರಾಹ್ನ ಆಗಮಿಸಿದ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರಷೋತ್ತಮ್ ರೂಪಾಲಾ ಅವರಿಗೆ ಜಿಲ್ಲೆಯ ಮೊಗವೀರ ಮುಖಂಡರು ಮನವಿ ಸಲ್ಲಿಸಿದರು.

ತಾವು ಈ ಕುರಿತು ಇದಕ್ಕೆ ಮೊದಲೂ ಕೇಂದ್ರ ಹಾಗೂ ರಾಜ್ಯ ಸರಕಾರ ಗಳಿಗೆ ಮನವಿಗಳನ್ನು ನೀಡಿದ್ದೇವೆ. ಈ ಕುರಿತು ಸೂಕ್ತ ಕ್ರಮವಹಿಸುವಂತೆ ಮೊಗವೀರ ಮುಂದಾಳು ಶ್ರೀಮಹಾಲಕ್ಷ್ಮೀ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಜಿ. ಶಂಕರ್ ಸಚಿವರಿಗೆ ತಿಳಿಸಿದರು.

ಮನವಿಯನ್ನು ಸ್ವೀಕರಿಸಿ ಮಾತನಾಡಿದ ಸಚಿವ ಪರಷೋತ್ತಮ್ ರೂಪಾಲ ಅವರು ತಾನು ಈ ಕುರಿತು ಪರಿಶೀಲಿಸುವುದಾಗಿ ಭರವಸೆ ನೀಡಿದರು. ರಾಜ್ಯ ಸರಕಾರ ಕಳೆದ ಎರಡು ವರ್ಷಗಳಿಂದ ಮೀನುಗಾರರಿಗೆ ಅಪತ್ಕಾಲೀನ ಅನುದಾನ ಯಾಕೆ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಇದು ತನ್ನ ಗಮನಕ್ಕೆ ಬಂದಿಲ್ಲ. ರಾಜ್ಯ ಸರಕಾರಕ್ಕೇ ಕೇಳಬೇಕೆಂದರು.

Similar News