ಉಡುಪಿ: ಇಂದಿನಿಂದ (ಮಾ.20) ಕುರಿಯ ಸಾಂಸ್ಕೃತಿಕ ಪ್ರತಿಷ್ಠಾನದ ಯಕ್ಷಗಾನ-ತಾಳಮದ್ದಲೆ ಸಪ್ತಾಹ
Update: 2023-03-20 08:32 GMT
ಉಡುಪಿ, ಮಾ.20: ಉಜಿರೆಯ ಕುರಿಯ ವಿಠ್ಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವು ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮಾ.20ರಿಂದ 26ರವರೆಗೆ ‘ಶ್ರೀ ಕೃಷ್ಣ ರಸಾಯನಂ’ಯಕ್ಷಗಾನ-ತಾಳಮದ್ದಲೆ ಸಪ್ತಾಹವನ್ನು ಆಯೋಜಿಸಿದೆ.
ಕುರಿಯ ಪ್ರತಿಷ್ಠಾನದ ರಜತ ಮಹೋತ್ಸವದ ಅಂಗವಾಗಿ ಗುರಿಕ್ಕಾರ ನೆಡ್ಲೆ ನರಸಿಂಹ ಭಟ್ ಅವರ ಸ್ಮರಣಾರ್ಥ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಈ ಕಾರ್ಯಕ್ರಮ ಪ್ರತಿದಿನ ಸಂಜೆ 7ರಿಂದ ರಾತ್ರಿ 9:45ರ ವರೆಗೆ ನಡೆಯಲಿದೆ.
ಮಾ.20ರಂದು ಸ್ಯಮಂತಕಮಣಿ, ಮಾ.21ರಂದು ಹರಿ ದರ್ಶನ, ಮಾ.22ರಂದು ಕರ್ಣ ಭೇದನ, ಮಾ.23ರಂದು ಗಾಂಡೀವಿ ಪ್ರತಿಜ್ಞೆ, ಮಾ.24ರಂದು ವಿದುರಾತಿಥ್ಯ, ಮಾ.25ರಂದು ಸುದರ್ಶನಗ್ರಹಣ ಮತ್ತು ಮಾ.26ರಂದು ಕೃಷ್ಣ ದರ್ಶನ ಎಂಬ ತಾಳೆಮದ್ದಳೆ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.