ಆಪ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಟೆನ್ನಿಸ್ ಕೃಷ್ಣ, ಬ್ರಿಜೇಶ್‌ ಕಾಳಪ್ಪ ಕಣಕ್ಕೆ

Update: 2023-03-20 16:23 GMT

ಬೆಂಗಳೂರು, ಮಾ.20: ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಾರ್ಟಿಯು 80 ಮಂದಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಸೋಮವಾರದಂದು ಪ್ರಕಟಿಸಿದ್ದಾರೆ.

ತೇರದಾಳ ವಿಧಾನಸಭಾ ಕ್ಷೇತ್ರದಿಂದ ಅರ್ಜುನ ಹಲಗಿಗೌಡರ, ಬಾದಾಮಿಯಿಂದ ಶಿವರಾಯಪ್ಪ ಜೋಗಿನ, ಬಾಗಲಕೋಟೆಯಿಂದ ರಮೇಶ ಬದ್ನೂರ ಮತ್ತು ಅಥಣಿ ವಿಧಾನಸಭಾ ಕ್ಷೇತ್ರದಿಂದ ಸಂಪತ್ ಕುಮಾರ ಶೆಟ್ಟಿ, ಬೈಲಹೊಂಗಲ ವಿಧಾನಸಭಾ ಕ್ಷೇತ್ರದಿಂದ ಬಿ.ಎಂ.ಚಿಕ್ಕನಗೌಡರ ಅಭ್ಯರ್ಥಿಗಳು ಎಎಪಿಯಿಂದ ಸ್ಪರ್ಧಿಸಲಿದ್ದಾರೆ. 

ಇನ್ನು ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರ ಹೆಸರು ಪಟ್ಟಿಯಲ್ಲಿದ್ದು, ಅವರು ತುಮಕೂರು ಜಿಲ್ಲೆಯ ತುರುವೇಕೆರೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಸಿ.ವಿ.ರಾಮನ್ ನಗರ ಕ್ಷೇತ್ರದಿಂದ ಮೋಹನ ದಾಸರಿ ಅವರು ಚಿಕ್ಕಪೇಟೆ ಕ್ಷೇತ್ರದಿಂದ ಬ್ರಿಜೇಶ್‌ ಕಾಳಪ್ಪ, ಸಾಗರ ಕ್ಷೇತ್ರದಿಂದ ಕೆ. ದಿವಾಕರ,ಹಾಸನ ಕ್ಷೇತ್ರದಿಂದ ಅಗಿಲೆ ಯೋಗೀಶ್ ಅವರು ಕಣಕ್ಕಿಳಿಯಲಿದ್ದಾರೆ.

ಅಭ್ಯರ್ಥಿಗಳ ಪಟ್ಟಿ ಹೀಗಿದೆ

ತೇರದಾಳ-ಅರ್ಜುನ ಹಲಗಿಗೌಡರ

ಬಾದಾಮಿ- ಶಿವರಾಯಪ್ಪ ಜೋಗಿನ

ಬಾಗಲಕೋಟೆ – ರಮೇಶ್ ಬದ್ನೂರ

ಅಥಣಿ- ಸಂಪತ್ ಕುಮಾರ್ ಶೆಟ್ಟಿ

ಬೈಲಹೊಂಗಲ-ಬಿ.ಎಂ. ಚಿಕ್ಕನಗೌಡರ

ರಾಮದುರ್ಗ- ಮಲ್ಲಿಕಾ ಜಾನ್ ನದಾಫ್

ಹುಬ್ಬಳ್ಳಿ ಧಾರವಾಡ ಪೂರ್ವ-ಬಸವರಾಜ್ ಎಸ್ ತೇರದಾಳ

ಹುಬ್ಬಳ್ಳಿ ಧಾರವಾಡ ಕೇಂದ್ರ-ವಿಕಾಸ ಸೊಪ್ಪಿನ

ಕಲಘಟಗಿ-ಮಂಜುನಾಥ ಜಕ್ಕಣ್ಣನವರ

ರೋಣ- ಆನೇಕಲ್ ದೊಡ್ಡಯ್ಯ

ಬ್ಯಾಡಗಿ-ಎಂ.ಎನ್ ನಾಯಕ

ರಾಣೆಬೆನ್ನೂರು-ಹನುಮಂತಪ್ಪ ಕಬ್ಬಾರ

ಬಸವಕಲ್ಯಾಣ- ದೀಪಕ ಮಲಗಾರ

ಹುಮನಾಬಾದ-ಬ್ಯಾಂಕ್ ರೆಡ್ಡಿ

ಬೀದರ ದಕ್ಷಿಣ-ನಸೀಮುದ್ದಿನ್ ಪಟೇಲ

ಭಾಲ್ಕಿ -ತುಕಾರಾಂ ನಾರಾಯಣ್ ರಾವ್ ಹಜಾರೆ

ಔರಾದ್-ಬಾಬು ರಾವ್ ಅಡ್ಡೆ

ಗುಲ್ಬರ್ಗ ಗ್ರಾಮೀಣ-ಡಾ. ರಾಘವೇಂದ್ರ ಚಿಂಚನಸೂರ

ಗುಲ್ಬರ್ಗ ದಕ್ಷಿಣ-ಸಿದ್ದರಾಮ ಅಪ್ಪಾರಾವ ಪಾಟೀಲ

ಗುಲ್ಬರ್ಗ ಉತ್ತರ-ಸಯ್ಯದ್ ಸಜ್ಜಾದ್ ಅಲಿ

ಇಂಡಿ-ಗೋಪಾಲ ಆ‌ ಪಾಟೀಲ

ಗಂಗಾವತಿ-ಶರಣಪ್ಪ ಸಜ್ಜಿಹೊಲ

ರಾಯಚೂರು ಗ್ರಾಮೀಣ-ಡಾ. ಸುಭಾಶಚಂದ್ರ ಸಾಂಭಾಜಿ

ರಾಯಚೂರು-ಡಿ. ವೀರೇಶ ಕುಮಾರ ಯಾದವ

ಮಾನ್ವಿ- ರಾಜ ಶ್ಯಾಮ ಸುಂದರ ನಾಯಕ

ಲಿಂಗಸೂರು-ಶಿವಪುತ್ರ ಗಾಣದಾಳ

ಸಿಂಧನೂರು-ಸಂಗ್ರಾಮ ನಾರಾಯಣ ಕಿಲ್ಲೇದ

ವಿಜಯನಗರ-ಡಿ.ಶಂಕರದಾಸ

ಕೂಡ್ಲಿಗಿ-ಶ್ರೀನಿವಾಸ ಎನ್

ಹರಪನಹಳ್ಳಿ-ನಾಗರಾಜ್ ಹೆಚ್

ಚಿತ್ರದುರ್ಗ- ಜಗದೀಶ ಬಿ ಇ.

ಜಗಳೂರು-ಗೋವಿಂದರಾಜು

ಹರಿಹರ-ಗಣೇಶ ದುರ್ಗದ

ದಾವಣಗೆರೆ ಉತ್ತರ-ಶ್ರೀಧರ್ ಪಾಟೀಲ

ಕುಣಿಗಲ್- ಜಯರಾಮಯ್ಯ

ಗುಬ್ಬಿ-ಪ್ರಭುಸ್ವಾಮಿ

ಸಿರಾ-ಶಶಿಕುಮಾರ್

ಪಾವಗಡ-ರಾಮನಂಜಪ್ಪ ಎಸ್

ಶೃಂಗೇರಿ -ರಾಜನ್ ಗೌಡ ಹೆಚ್. ಎಸ್

ಭದ್ರಾವತಿ-ಅನಂದ

ಶಿವಮೊಗ್ಗ-ನೇತ್ರಾವತಿ ಟಿ.

ಮೂಡಬಿದ್ರಿ-ವಿಜಯನಾಥ ವಿಠಲ ಶೆಟ್ಟಿ

ಮಂಗಳೂರು ನಗರ ದಕ್ಷಿಣ-ಸಂತೋಷ್ ಕಾಮತ್

ಸುಳ್ಯ-ಸುಮನಾ

ಕಾರ್ಕಳ -ಡ್ಯಾನಿಯಲ್

ಶಿರಸಿ-ಹಿತೇಂದ್ರ ನಾಯಕ

ಮಳವಳ್ಳಿ-ಬಿ.ಸಿ.ಮಹಾದೇವ ಸ್ವಾಮೀ

ಮಂಡ್ಯ-ಬೊಮ್ಮಯ್ಯ

ಪಿರಿಯಾಪಟ್ಟಣ-ರಾಜಶೇಖರ್ ದೊಡ್ಡಣ್ಣ

ಚಾಮರಾಜ- ಮಾಲವಿಕಾ ಗುಬ್ಬಿ ವಾಣಿ

ನರಹಿಂಹರಾಜ-ಧರ್ಮಶ್ರೀ

ಟಿ. ನರಸಿಪುರ-ಸಿದ್ದರಾಜು

ಮಾಗಡಿ-ರವಿಕಿರಣ್‌ ಎಂ.ಎನ್

ರಾಮನಗರ- ನಂಜಪ್ಪ ಕಾಳೇಗೌಡ

ಕನಕಪುರ-ಪುಟ್ಟರಾಜು ಗೌಡ

ಚನ್ನಪಟ್ಟಣ- ಶರತ್ಚಂದ್ರ

ದೇವನಹಳ್ಳಿ-ಶಿವಪ್ಪ ಬಿ.ಕೆ.

ದೊಡ್ಡಬಳ್ಳಾಪುರ-ಪುರುಷೋತ್ತಮ

ನೆಲಮಂಗಲ-ಗಂಗಬೈಲಪ್ಪ ಬಿ.ಎಂ

ಬಾಗೇಪಲ್ಲಿ- ಮಧು ಸೀತಪ್ಪ

ಚಿಂತಾಮಣಿ-ಸೈ ಬೈರೆಡ್ಡಿ

ಕೆಜಿಎಫ್ -ಆರ್ ಗಗನ ಸುಕನ್ಯಾ

ಮಾಲೂರು-ರವಿಶಂಕರ್ ಎಂ

ದಾಸರಹಳ್ಳಿ- ಕೀರ್ತನ್ ಕುಮಾರ

ಮಹಾಲಕ್ಷ್ಮಿ ಬಡಾವಣೆ-ಶಾಂತಲಾ ದಾಮ್ಲೆ

ಮಲ್ಲೇಶ್ವರ- ಸುಮನ್ ಪ್ರಶಾಂತ್

ಹೆಬ್ಬಾಳ-ಮಂಜುನಾಥ ನಾಯ್ಡು

ಪುಲಕೇಶಿನಗರ- ಸುರೇಶ್ ರಾಥೋಡ್

ಶಿವಾಜಿನಗರ-ಪ್ರಕಾಶ್ ನೆಡುಂಗಡಿ

ಶಾಂತಿನಗರ-ಕೆ.ಮಥಾಯ್

ರಾಜಾಜಿನಗರ- ಬಿ.ಟಿ.ನಾಗಣ್ಣ

ವಿಜಯನಗರ- ಡಾ ರಮೇಶ್ ಬೆಲ್ಲಂಗೊಂಡ

ಪದ್ಮನಾಭನಗರ-ಅಜಯ್ ಗೌಡ

ಬಿ.ಟಿ.ಎಂ ಬಡಾವಣೆ- ಶ್ರೀನಿವಾಸ್ ರೆಡ್ಡಿ

ಬೊಮ್ಮನಹಳ್ಳಿ-ಸೀತಾರಾಮ್ ಗುಂಡಪ್ಪ

Similar News