ಸುರತ್ಕಲ್: ಭಗತ್ ಸಿಂಗ್ ಹುತಾತ್ಮ ದಿನಾಚರಣೆ

Update: 2023-03-23 15:26 GMT

ಮಂಗಳೂರು: ಸ್ವಾತಂತ್ರ್ಯ ಚಳವಳಿಯ ಧ್ರುವತಾರೆಗಳಾದ ಶಹೀದ್ ಭಗತ್ ಸಿಂಗ್ ಮತ್ತವರ ಸಂಗಾತಿಗಳಾದ ರಾಹ್‌ಗುರು, ಸುಖದೇವ್ ಅವರು ಬ್ರಿಟಿಷರ ನೇಣುಗಂಬಕ್ಕೆ ಏರಿದ ಆ ಬಲಿದಾನವನ್ನು ನೆನಪಿಸಿ ಡಿವೈಎಫ್‌ಐ ಸುರತ್ಕಲ್ ಘಟಕದ ಆಶ್ರಯದಲ್ಲಿ ಕಾನ ಜಂಕ್ಷನ್ ಬಳಿ ಕ್ಯಾಂಡಲ್ ದೀಪ ಬೆಳಗಿ ಹುತಾತ್ಮ ಸಂಗಾತಿಗಳಿಗೆ ಕೆಂಪು ವಂದನೆ ಸಲ್ಲಿಸಲಾಯಿತು.

ಈ ಸಂದರ್ಭ ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ನಗರ ಉಪಾಧ್ಯಕ್ಷ ಶ್ರೀನಾಥ್ ಕುಲಾಲ್, ಸುರತ್ಕಲ್ ಘಟಕದ ಅಧ್ಯಕ್ಷ ಬಿ.ಕೆ ಮಕ್ಸೂದ್, ಮುಖಂಡರಾದ ಸೈಫರ್ ಆಲಿ ಚೊಕ್ಕಬೆಟ್ಟು, ಮುಸ್ತಫಾ ಅಂಗರಗುಂಡಿ, ಜೋಯ್ ಜನತಾ ಕಾಲನಿ, ಗಣೇಶ್ ಪ್ರೇಮ್ ನಗರ, ಫ್ರಾನ್ಸಿಸ್ ಕಾನ, ಹರೀಶ್, ನವಾಝ್ ಕುಳಾಯಿ, ಇಮ್ತಿಯಾಝ್ ಕುಳಾಯಿ, ಸಾಮಾಜಿಕ ಮುಂದಾಳು ಶರೀಫ್ ಜನತಾ ಕಾಲನಿ ಉಪಸ್ಥಿತರಿದ್ದರು.

Similar News