ಮಂಗಳೂರು: ಕ್ಯಾಂಟೀನ್ ವ್ಯವಹಾರದಲ್ಲಿ ನಷ್ಟ; ವ್ಯಕ್ತಿ ನಾಪತ್ತೆ

Update: 2023-03-28 15:38 GMT

ಮಂಗಳೂರು, ಮಾ.28: ನಗರದ ಕುಲಶೇಖರ ಮತ್ತು ಬೆಳಗಾವಿಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ಉಳಾಯಿಬೆಟ್ಟು ಗ್ರಾಮದ ನಡಿಗುತ್ತು ನಿವಾಸಿ ಜಗದೀಶ್ ಕೆ. ಶೆಟ್ಟಿ (58) ಎಂಬವರು ನಾಪತ್ತೆಯಾದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೊಂಡಾಲ ಸಚ್ಚಿದಾನಂದ ಶೆಟ್ಟಿ ಮಾಲಕತ್ವದ ದುರ್ಗಾ ಫೆಸಿಲಿಟಿ ಆ್ಯಂಡ್ ಮ್ಯಾನೇಜ್ಮೆಂಟ್ ಸರ್ವಿಸಸ್ ಪ್ರೈ.ಲಿ. ಮೂಲಕ ಕುಲಶೇಖರದ ಕೆಎಂಎಫ್‌ನಲ್ಲಿ  10 ವರ್ಷದಿಂದ ಮತ್ತು ಬೆಳಗಾವಿಯ ವಿಟಿ ಕಾಲೇಜಿನಲ್ಲಿ ಜಗದೀಶ್ 6 ತಿಂಗಳಿನಿಂದ ಕ್ಯಾಂಟೀನ್ ವ್ಯವಹಾರ ನಡೆಸುತ್ತಿದ್ದರು. ಈ ವ್ಯವಹಾರದಲ್ಲಿ ಜಗದೀಶ್ ನಷ್ಟ ಅನುಭವಿಸಿದ್ದರು ಎನ್ನಲಾಗಿದೆ. ಆದರೂ ಕ್ಯಾಂಟೀನ್‌ನ ಮಾಲಕರು ಕಮಿಷನ್ ವಿಚಾರದಲ್ಲಿ ಮತ್ತು ಲೆಕ್ಕಪತ್ರಕ್ಕೆ ಸಂಬಂಧಿಸಿದಂತೆ ಒತ್ತಡ ಹಾಕುತ್ತಿದ್ದರು ಎಂದು ಆರೋಪಿಸಲಾಗಿದೆ.

ಇದರಿಂದ ಬೇಸತ್ತ ಜಗದೀಶ್ ಶೆಟ್ಟಿ ಮಾ.27ರಂದು ಮನೆಯಲ್ಲೇ ಮೊಬೈಲ್ ಬಿಟ್ಟು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಜಗದೀಶ್‌ ಅವರ ಪತ್ನಿ ಹರ್ಷಲತಾ ಜೆ.ಶೆಟ್ಟಿ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

Similar News