×
Ad

ಜಗದೀಶ್​ ಶೆಟ್ಟರ್​ ಮತ್ತೆ ಬಿಜೆಪಿಗೆ ಬರುತ್ತಾರೆಂಬ ನಿರೀಕ್ಷೆ ಮಾಡಲ್ಲ: ಸಿಎಂ ಬೊಮ್ಮಾಯಿ

Update: 2023-04-17 12:23 IST

ಬೆಂಗಳೂರು: 'ಜಗದೀಶ್​ ಶೆಟ್ಟರ್​ ಮತ್ತೆ ಪಕ್ಷಕ್ಕೆ ಬರುತ್ತಾರೆಂಬ ನಿರೀಕ್ಷೆ ಮಾಡಲ್ಲ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಚುನಾವಣೆ ವೇಳೆ ಕಾಂಗ್ರೆಸ್​ಗೆ ಲಿಂಗಾಯತರ ಬಗ್ಗೆ ಪ್ರೀತಿ ಬಂದಿದೆ. ಬಿ.ಎಸ್. ಯಡಿಯೂರಪ್ಪ ಅವರು ಇರುವವರೆಗೂ ಲಿಂಗಾಯಿತ ಸಮುದಾಯ ನಮನ್ನ ಬಿಟ್ಟು ಹೋಗೋದಿಲ್ಲ' ಎಂದು ವಿಶ್ವಾಸ ವ್ಯಕ್ತಪಡಿಸಿದರು. 

'ಬಿಜೆಪಿ ಜಗದೀಶ್​ ಶೆಟ್ಟರ್​ರನ್ನು ಗೌರವಯುತವಾಗಿ ಕಂಡಿದೆ. ಜಗದೀಶ್​ ಶೆಟ್ಟರ್​ರನ್ನು ಕಡೆಗಣಿಸಿರುವ ಪ್ರಶ್ನೆಯೇ ಇಲ್ಲ. ಎಲ್ಲಾ ಬೆಳವಣಿಗೆ ಪಕ್ಷದ ವರಿಷ್ಠರ ಗಮನಕ್ಕೆ ಬಂದಿದೆ. ಕಾಂಗ್ರೆಸ್​ನ ಸಂಸ್ಕೃತಿ ಯೂಸ್​​ ಆ್ಯಂಡ್​ ಥ್ರೋ. ವೀರೇಂದ್ರ ಪಾಟೀಲ್, ಬಂಗಾರಪ್ಪ, ದೇವರಾಜ ಅರಸರನ್ನ ಹೊರಹಾಕಿದಂಥ  ಪಕ್ಷಕ್ಕೆ ಶೆಟ್ಟರ್  ಹೋಗಿದ್ದಾರೆ. ಶೆಟ್ಟರ್ ಅವರನ್ನೂ ಅದು ಯೂಸ್​​ ಆ್ಯಂಡ್​ ಥ್ರೋ ಮಾಡುತ್ತೆ. ಇದೆಲ್ಲಾ ಗೊತ್ತಿದ್ದರೂ ಶೆಟ್ಟರ್ ಯಾಕೆ ಕಾಂಗ್ರೆಸ್​ಗೆ ಹೋದ್ರೋ ಗೊತ್ತಿಲ್ಲ' ಎಂದರು. 

Similar News