ಉಡುಪಿ: ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿಯ ಚಿನ್ನಾಭರಣ ಕಳವು
Update: 2023-04-28 21:07 IST
ಉಡುಪಿ, ಎ.28: ಗ್ರಾಹಕರ ಸೋಗಿನಲ್ಲಿ ಜ್ಯುವೆಲ್ಲರಿಗೆ ಬಂದ ಅಪರಿಚಿತ ವ್ಯಕ್ತಿಗಳಿಬ್ಬರು ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು ಮಾಡಿರುವ ಘಟನೆ ನಗರದ ಕನಕದಾಸ ರಸ್ತೆಯಲ್ಲಿ ಎ.27ರಂದು ಸಂಜೆ ವೇಳೆ ನಡೆದಿದೆ. ಕಿಶೋರ್ ಆಚಾರ್ಯ ಎಂಬವರ ಹರ್ಷಿತಾ ಜುವೆಲ್ಲರಿ ಅಂಗಡಿಗೆ 40 ವರ್ಷ ಪ್ರಾಯದ ಇಬ್ಬರು ಅಪರಿಚಿತ ಗಂಡಸರು ಬಂದು ಮೂಗುತಿ ಬಗ್ಗೆ ಕೇಳಿದರು. ಈ ವೇಳೆ ಅಂಗಡಿಯವರು ಚಿನ್ನದ ಮೂಗುತಿ ಇರುವ ಪ್ಯಾಕೇಟ್ ಗಳನ್ನು ತೋರಿಸಿದ್ದು, ಅಪರಿಚಿತರು ಸ್ವಲ್ಪಸಮಯ ಮಾತನಾಡಿ ಅದರಲ್ಲಿದ್ದ 20 ಗ್ರಾಂ ತೂಕದ ಮೂಗುತಿಗಳಿದ್ದ ಒಂದು ಪ್ಯಾಕೇಟ್ನ್ನು ಕಳವು ಮಾಡಿ ಕೊಂಡು ಹೋಗಿರುವುದಾಗಿ ದೂರಲಾಗಿದೆ. ಕಳವಾದ ಸೊತ್ತಿನ ಮೌಲ್ಯ 1,20,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.