×
Ad

16 ಮತಗಳ ಅಂತರದಿಂದ ಸೋಲು: ಕೋರ್ಟ್ ಮೊರೆ ಹೋಗಲು ಸೌಮ್ಯಾ ರೆಡ್ಡಿ ನಿರ್ಧಾರ

Update: 2023-05-14 22:02 IST

ಬೆಂಗಳೂರು, ಮೇ 14: ‘ಕೇವಲ 16 ಮತಗಳ ಅಂತರದಿಂದ ಸೋತ ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಕೋರ್ಟ್‍ಗೆ ಮೊರೆ ಹೋಗಲು ನಿರ್ಧರಿಸಿದ್ದಾರೆ.

ರವಿವಾರ ಕುರಿತು ಟ್ವೀಟ್ ಮಾಡಿರುವ ಅವರು, ‘ಜಯನಗರ ಕ್ಷೇತ್ರದಲ್ಲಿ ನನಗೆ ಮತವನ್ನು ಹಾಕಿದವರಿಗೆ ನಾನು ಋಣಿಯಾಗಿದ್ದೇನೆ. ಸಾವಿರಾರು ಜನರು ನನಗೆ ಬೆಂಬಲವಾಗಿ ನಿಂತಿದ್ದೀರಿ. ಜಯನಗರ ಕ್ಷೇತ್ರದ ಮತೆಣಿಕೆಯಲ್ಲಿ ಅನ್ಯಾಯವಾಗಿದ್ದು, ಇದರ ವಿರುದ್ಧ ನಾನು ನಡೆಸುವ ಹೋರಾಟದಲ್ಲಿ ಜೊತೆಯಾಗಿರಬೇಕು ಎಂದು ಮನವಿ ಮಾಡಿದ್ದಾರೆ.

ಜಯನಗರ ಕ್ಷೇತ್ರದ ಎಣಿಕೆ ಸಂದರ್ಭದಲ್ಲಿ ಗೊಂದಲಗಳು ಉಂಟಾಗಿ ಶನಿವಾರ ತಡರಾತ್ರಿ ಫಲಿತಾಂಶ ಪ್ರಕಟವಾಯಿತು. ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಅವರು 16 ಮತಗಳಿಂದ ಸೌಮ್ಯರೆಡ್ಡಿಯನ್ನು ಸೋಲಿಸಿದ್ದಾರೆ. 

ಇದಕ್ಕೂ ಮೊದಲು ಎರಡು ಬಾರಿ ಮತ ಎಣಿಕೆ ನಡೆಸಿದಾಗ ಸೌಮ್ಯರೆಡ್ಡಿ ಅವರು ಸುಮಾರು 100 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ನಂತರ ಮತ ಎಣಿಕೆ ಮಾಡಿದಾಗ ರಾಮಮೂರ್ತಿ ಅವರಿಗೆ 16 ಮತಗಳು ಹೆಚ್ಚಾಗಿ ಬಂದವು.

Similar News