ಕೋಡ್ ವರ್ಡ್ ಬಳಸಿ ಮತದಾರರಿಗೆ ಹಣ ಹಂಚಿಕೆ ಆರೋಪ: ಮಾಜಿ ಸಚಿವ ಸೇರಿ ಹಲವರ ವಿರುದ್ಧ ಫ್‍ಐಆರ್ ದಾಖಲು

Update: 2023-05-16 17:51 GMT

ಬೆಂಗಳೂರು, ಮೇ 16:ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇಲ್ಲಿನ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೋಡ್ ವರ್ಡ್ ಬಳಸಿಕೊಂಡು ಮತದಾರರಿಗೆ ಹಣ ಹಂಚಿಕೆ ಆರೋಪ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿ ಮತ್ತು ಅವರ ಬೆಂಬಲಿಗರು ಹಣ ಹಂಚಿಕೆ ಮಾಡಿರುವ ಆರೋಪ ಕೇಳಿಬಂದಿದೆ.

ಕಬ್ಬನ್ ಪೇಟೆಯಲ್ಲಿ ಹಣ ಹಂಚಿದ್ದು, ಇದಕ್ಕೂ ಮೊದಲು ಕೆಲವರಿಗೆ 20 ರೂಪಾಯಿಗಳ ನೋಟುಗಳನ್ನು ನೀಡಿ, ಆನಂತರ, ಕಚೇರಿ ಬಳಿ ಹೋಗಿ ಈ ನೋಟುಗಳನ್ನು ತೋರಿಸಿ 2 ಸಾವಿರ ರೂ.ಗಳನ್ನು ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಈ ಸಂಬಂಧ ಚುನಾವಣಾ ವೀಕ್ಷಕ ಅಧಿಕಾರಿಗಳು ನೀಡಿರುವ ದೂರಿನನ್ವಯ ಕೃಷ್ಣಯ್ಯ ಶೆಟ್ಟಿ ಹಾಗೂ ಅವರ ಬೆಂಬಲಿಗರು ಎನ್ನಲಾದ ಚಂದ್ರಶೇಖರ್, ವಸಂತ್ ಕುಮಾರ್ ಹಾಗೂ ವೆಂಕಟೇಶ್ ಎಂಬಾತನ ಮೇಲೆ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಪ್ಪತ್ತು ರೂಪಾಯಿ ಮುಖಬೆಲೆಯ ಕೆಲ ನೋಟುಗಳನ್ನು ಜಪ್ತಿ ಮಾಡಲಾಗಿದೆ.

Similar News