ಮಂಗಳೂರು: ದ.ಕ ಜಿಲ್ಲಾ ಖಾಝಿಯನ್ನು ಭೇಟಿಯಾದ ಸ್ಪೀಕರ್ ಯುಟಿ ಖಾದರ್

Update: 2023-05-26 06:56 GMT

ಮಂಗಳೂರು: ಕರ್ನಾಟಕ ವಿಧಾನಸಬಾ ಸ್ಪೀಕರ್ ಆಗಿ ಆಯ್ಕೆಯಾದ ಯುಟಿ ಖಾದರ್ ಅವರು ಮಂಗಳೂರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ದ.ಕ ಜಿಲ್ಲಾ ಖಾಝಿವರಾದ ಅಲ್‌ಹಾಜ್ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ‌ಅಝ್ಹರಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಆಡಳಿತ ಸಮಿತಿ ಸದಸ್ಯರಾದ ಅಬ್ದುಲ್ ಸಮದ್ ಹಾಜಿ, ಬದ್ರಿಯಾ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಸಿ.ಮಹ್ಮೂದ್ ಹಾಜಿ, ದ.ಕ ಜಿಲ್ಲಾ ಸಮಸ್ತ ಮದ್ರಸ ಮ್ಯಾನೇಜ್ಮೆಂಟ್ ಅದ್ಯಕ್ಷರಾದ MH  ಮೊಯ್ದೀನ್ ಹಾಜಿ ಅಡ್ಡೂರು, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಹಾಜಿ ಕೊಡಾಜೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Similar News