ಬಜಾಲ್ ಚರ್ಚ್‌ನಲ್ಲಿ ವಾರ್ಷಿಕ ಹಬ್ಬ

Update: 2023-05-28 14:55 GMT

ಮಂಗಳೂರು, ಮೇ 28: ನಗರ ಹೊರವಲಯದ ಬಜಾಲ್‌ನ ಹೋಲಿ ಸ್ಪಿರಿಟ್ ಚರ್ಚ್‌ನ ವಾರ್ಷಿಕ ಹಬ್ಬವು ರವಿವಾರ ನಡೆಯಿತು.

ಮಂಗಳೂರು ಧರ್ಮಪ್ರಾಂತದ ಸಿಟಿ ವಲಯದ ಪ್ರಧಾನ ಗುರು ಫಾ. ಜೇಮ್ಸ್ ಡಿಸೋಜ ಬಲಿ ಪೂಜೆಯ ನೇತೃತ್ವವನ್ನು ವಹಿಸಿ ಪ್ರವಚನ ನೀಡಿದರು.

ಚರ್ಚ್‌ನ ಪ್ರಧಾನ ಗುರು ಫಾ.ಆಂಡ್ರೂ ಡಿಸೋಜ ಹಬ್ಬದ ಮಹತ್ವ ವಿವರಿಸಿದರು. ಬಲಿ ಪೂಜೆಯಲ್ಲಿ ಫಾ. ಸ್ಟೇನಿ ಮೊಂತೆರೋ, ಫಾ. ರವಿ ಕುಮಾರ್ ಬರ್ತುಲಾ, ಫಾ. ಚಾರ್ಲ್ಸ್ ಮಿನೇಜಸ್ ಜಪ್ಪು, ಫಾ. ಪ್ರದೀಪ್ ಕೊರೆಯಾ ಬೆಳಗಾವಿ,  ಸಿಒಡಿಪಿ ನಿರ್ದೇಶಕ ಫಾ. ವಿನ್ಸೆಂಟ್ ಡಿಸೋಜ, ಫಾ. ಫ್ರಾನ್ಸಿಸ್ ಮಿನೇಜಸ್ ಕಪುಚಿನ್ ಮತ್ತು ಫಾ. ರಾಬರ್ಟ್ ಡಿಸೋಜ ಭಾಗವಹಿಸಿದ್ದರು.

ಚರ್ಚ್ ಉಪಾಧ್ಯಕ್ಷ ಮೌರಿಸ್ ಡಿಸೋಜ, ಕಾರ್ಯದರ್ಶಿ ಲೀಡಿಯಾ ಲೋಬೊ ಉಪಸ್ಥಿತರಿದ್ದರು.

Similar News