​ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ NIA ದಾಳಿ

Update: 2023-05-31 03:22 GMT

ಮಂಗಳೂರು :​ ಬುಧವಾರ ​ ಬೆಳ್ಳಂಬೆಳಿಗ್ಗೆ  ಸ್ಥಳೀಯ ಪೊಲೀಸ್ ಅಧಿಕಾರಿಗಳ ನೆರವು ಪಡೆದು​ ರಾಷ್ಟ್ರೀಯ ತನಿಖಾ ಸಂಸ್ಥೆ ​ ​(​NIA)​ 16 ಕಡೆ  ದಾಳಿ ನಡೆಸಿ ದಾಖಲೆ​ಗಳನ್ನು ​ ಪರಿಶೀಲಿಸುತ್ತಿ​ದೆ ಎಂದು ತಿಳಿದು ಬಂದಿದೆ. ​ ಹವಾಲಾ ಹಣಕ್ಕೆ ಸಂಬಂಧಿಸಿದ ಆರೋಪಗಳ ಬಗ್ಗೆ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.

ದೇಶದಲ್ಲಿ ಕೋಮು ಗಲಭೆ ಸೃಷ್ಠಿಸಲು ಯತ್ನ ಆರೋಪ​ಗಳ ​ ಹಿನ್ನೆಲೆ ಪ್ರಕರಣದ ತನಿಖೆಯ ಜಾಡು ಹಿಡಿದು ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದ NIA ಅಧಿಕಾರಿಗಳು, ಇತ್ತೀಚೆಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಮತ್ತು ಪುತ್ತೂರಿನಲ್ಲಿ ದಾಳಿ ನಡೆಸಿ​ ಐವರನ್ನು ವಶಕ್ಕೆ ಪಡೆದಿದ್ದರು.

Similar News