ವಿಶ್ವ ತಂಬಾಕು ರಹಿತ ದಿನ; ಸೈಕಲ್ ಜಾಥಾ ಮೂಲಕ ಅರಿವು ಮೂಡಿಸಿದ ಸಚಿವ ದಿನೇಶ್ ಗುಂಡೂ ರಾವ್

Update: 2023-05-31 09:08 GMT

ಬೆಂಗಳೂರು: ವಿಶ್ವ ತಂಬಾಕು ರಹಿತ ದಿನ ಇಂದು, ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಸೌಧದಿಂದ ಫ್ರೀಡಂ ಪಾರ್ಕ್‌ವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂ ರಾವ್ ಸೈಕಲ್ ಜಾಥಾ ನಡೆಸಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಇಂದು ಆರೋಗ್ಯ ಸೌಧದಿಂದ ಫ್ರೀಡಂ ಪಾರ್ಕ್‌ವರೆಗೆ ಸೈಕಲ್ ಜಾಥಾ ನಡೆಸಿದೆ. ‘ಆಹಾರ ಬೇಕು-ತಂಬಾಕು ಅಲ್ಲ' ಎಂಬ ಘೋಷವಾಕ್ಯದೊಂದಿಗೆ ಸೈಕಲ್ ಜಾಥಾ ನಡೆಸಲಾಯಿತು. ಆರೋಗ್ಯ ಇಲಾಖೆಯ‌ ಆಯುಕ್ತ, NHM ನಿರ್ದೇಶಕ ಪಾಲ್ಗೊಂಡರು ಎಂದು ತಿಳಿಸಿದ್ದಾರೆ.

Similar News