ಅಂಗಡಿಯಿಂದ ಕಳವು ಪ್ರಕರಣ : ಇಬ್ಬರು ಆರೋಪಿಗಳ ಬಂಧನ

Update: 2023-06-02 16:13 GMT

ಪುತ್ತೂರು: ಕಳೆದ ಎಂಟು ತಿಂಗಳ ಹಿಂದೆ ಪುತ್ತೂರು ನಗರದಲ್ಲಿರುವ ಅಂಗಡಿಯೊಂದರಿಂದ ಸುಮಾರು ರೂ. 15 ಲಕ್ಷ  ನಗದು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ದಾವಣಗೆರೆ ಜಿಲ್ಲೆಯ ದೇವರಾಜ ಅರಸ್ ಬಡವಾಣೆಯ ನಿವಾಸಿ ಸಮೀರ್ ಯಾನೆ ಕಪ್ಪ ಮತ್ತು ಹಾಸನ ಜಿಲ್ಲೆಯ ಶಂಕರಿಪುರಂ ನಿವಾಸಿ ಚಂದ್ರಶೇಖರ್ ಯಾನೆ ಚಂದು ಎಂದು ಗುರುತಿಸಲಾಗಿದೆ.

ಆರೋಪಿಗಳು ನಗರದ ಪ್ರಕಾಶ್ ಫೂಟ್‌ವೇರ್‌ ಎಂಬ ಚಪ್ಪಲಿ ಮಾರಾಟದ ಅಂಗಡಿಯಿಂದ 2022ರ ಸೆ.16ರಂದು ರಾತ್ರಿ ಹಂಚು ಸರಿಸಿ ಅಂಗಡಿಗೆ ನುಗ್ಗಿ ಸುಮಾರು ರೂ. 15 ಲಕ್ಷ ನಗದು ಹಣ ಕಳ್ಳತನಗೈದು ಪರಾರಿಯಾಗಿದ್ದು, ಈ ಬಗ್ಗೆ ಅಂಗಡಿ ಮಾಲಕರು ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುತ್ತಿದ್ದರು. ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ. 

Similar News