ಬಂಟರ ನಿಗಮ ಸ್ಥಾಪನೆಗೆ ಮನವಿ

Update: 2023-06-03 12:00 GMT

ಮಂಗಳೂರು, ಜೂ.3: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿಯೋಗವು ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ರನ್ನು ಭೇಟಿಯಾಗಿ ಬಂಟರ ನಿಗಮ ಸ್ಥಾಪಿಸಬೇಕು ಮತ್ತು ಬಂಟರ ಮೀಸಲಾತಿಯ ಬಗ್ಗೆ ಸೂಕ್ತ ಕ್ರಮ ಕೈಕೊಳ್ಳಬೇಕು. ಬಂಟರ ಸಮುದಾಯವನ್ನು 3‘ಬಿ’ಯಿಂದ 2‘ಎ’ಗೆ ಸೇರ್ಪಡೆ ಗೊಳಿಸಬೇಕೆಂದು ಮನವಿ ಸಲ್ಲಿಸಿದೆ.

ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕೋಶಾಧಿಕಾರಿ ಉಳ್ತೂರು ಮೋಹನ್‌ದಾಸ್ ಶೆಟ್ಟಿ ನಿಯೋಗದಲ್ಲಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಸಂಸದ ಡಿಕೆ  ಸುರೇಶ್ ಉಪಸ್ಥಿತರಿದ್ದರು.

Similar News