ಒಡಿಶಾ ರೈಲು ದುರಂತ: ಸಾವು ನೋವಿನ ಬಗ್ಗೆ ಮಂಗಳೂರು ಬಿಷಪ್ ಸಂತಾಪ

Update: 2023-06-05 09:42 GMT

ಮಂಗಳೂರು: ಒಡಿಶಾದ ಬಾಲ ಸೋರ್ ಜಿಲ್ಲೆಯಲ್ಲಿ ನಡೆದ  ಭೀಕರ ರೈಲು ದುರಂತದ ಬಗ್ಗೆ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಬಿಷಪ್ ರೈ.ರೆ. ಡಾ.ಪೀಟರ್ ಪಾವ್ಲ್ ಸಲ್ದಾನ ಆಘಾತ ವ್ಯಕ್ತಪಡಿಸಿದ್ದು, 275 ಮಂದಿ ಸಾವನ್ನಪ್ಪಿ ಒಂದು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತಪಟ್ಟವರ ಆತ್ಮಕ್ಕೆ ಚಿರ ಶಾಂತಿ ಲಭಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಹಾಗೂ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುತ್ತೇನೆ ಎಂದವರು ತಿಳಿಸಿದ್ದಾರೆ.

ದುರಂತದಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಬಿಷಪ್ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ನಡೆದ ಈ ತ್ರಿವಳಿ ರೈಲು ಅಪಘಾತದಲ್ಲಿ 17 ಬೋಗಿಗಳು ಹಳಿ ತಪ್ಪಿದ್ದು ಈ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದವರು ಸಾವು ನೋವು ಅನುಭವಿಸಿದ್ದಾರೆ.

Similar News