ಪಕ್ಕಲಡ್ಕ: ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ವಿತರಣೆ

Update: 2023-06-05 13:08 GMT

ಮಂಗಳೂರು, ಜೂ.5: ವಿಶ್ವ ಪರಿಸರ ದಿನದ ಅಂಗವಾಗಿ ಪಕ್ಕಲಡ್ಕ ಯುವಕ ಮಂಡಲ (ರಿ) ಮತ್ತು ಆಟ ಪಾಠ ಮಕ್ಕಳ ತಂಡದ ನೇತೃತ್ವದಲ್ಲಿ ರವಿವಾರ ಬಜಾಲ್ ಪಕ್ಕಲಡ್ಕದಲ್ಲಿ ಸಾಮೂಹಿಕವಾಗಿ ಸಸಿಗಳನ್ನು ವಿತರಣೆ ಮಾಡುವ ಮೂಲಕ ಪರಿಸರ ದಿನವನ್ನು ಆಚರಿಸಿದರು.

ಮಕ್ಕಳಿಗೆ ಗಿಡಗಳನ್ನು ವಿತರಿಸಿದ ಪಕ್ಕಲಡ್ಕ ಯುವಕ ಮಂಡಲದ ಅಧ್ಯಕ್ಷ ದೀಪಕ್ ಬಜಾಲ್ ಮಾತನಾಡಿ ‘ಮನುಷ್ಯ ತನ್ನ ಸ್ವಾರ್ಥ ಸಾಧನೆಗೆ ಪರಿಸರವನ್ನು ಮಾಲಿನ್ಯ ಮಾಡುವ, ಕಾಡುಗಳನ್ನೆಲ್ಲಾ ನಾಶ ಮಾಡುತ್ತಾನೆ. ಪಕೃತಿಯಲ್ಲಿ ಅಸಮತೋಲನ ಉಂಟಾದ ಪರಿಣಾಮಗಳನ್ನು ನಾವು ಇವತ್ತು ಎದುರಿಸುತ್ತಿದ್ದೇವೆ. ಮರಗಳನ್ನು ಬೆಳೆಸಿ ಪರಿಸರವನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯವಾಗಿದೆ’ ಎಂದರು.

ಈ ವೇಳೆ ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿ ಪ್ರೀತೇಶ್ ಬಜಾಲ್, ಧೀರಜ್ ಬಜಾಲ್, ಅಶೋಕ್ ಎನೆಲ್ಮಾರ್, ಡಿವೈಎಫ್‌ಐ ಮುಖಂಡರಾದ ಜಗದೀಶ್ ಕುಲಾಲ್, ಆನಂದ ಎನೆಲ್ಮಾರ್, ಸತೀಶ್, ಆನಂದ ಉಪಸ್ಥಿತರಿದ್ದರು.

Similar News