ಚಾಕುವಿನ ಇರಿದು ಪತಿಯಿಂದ ಪತ್ನಿಯ ಹತ್ಯೆ

Update: 2023-06-05 13:51 GMT

ಬೆಂಗಳೂರು, ಜೂ. 5: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪತಿಯೇ ತನ್ನ ಪತ್ನಿಯನ್ನು ಚಾಕುವಿನ ಇರಿದು ಕೊಲೆ ಮಾಡಿರುವ ದುರ್ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ನಡೆದಿದೆ.

ಮಂಜುನಾಥ ನಗರದ ನಾಗರತ್ನ (32) ಕೊಲೆಯಾದ ಮಹಿಳೆಯಾಗಿದ್ದು, ಕೃತ್ಯ ನಡೆಸಿದ ಆಕೆಯ ಪತಿ ಅಯ್ಯಪ್ಪನನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ವಿಚಾರಣೆ ಕೈಗೊಂಡಿದ್ದಾರೆ.

ಸಿಟಿ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅಯ್ಯಪ್ಪ, ನಾಗರತ್ನಳನ್ನು 12 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ 11 ವರ್ಷದ ಮಗ ಕುಮಾರ್ ಹಾಗೂ 7 ವರ್ಷದ ಮಗಳು ಭೂಮಿಕಾ ಇದ್ದು ಅಕ್ಕನ ಮನೆಯಲ್ಲಿ ಅಯ್ಯಪ್ಪ ಮಕ್ಕಳನ್ನು ಬಿಟ್ಟಿದ್ದರು.

ಮೊದಲು ಶಿವನಗರದಲ್ಲಿದ್ದ ದಂಪತಿಯು 5 ತಿಂಗಳಿಂದ ಮಂಜುನಾಥ ನಗರದಲ್ಲಿ ವಾಸವಿದ್ದರು. ಇನ್ನು ಅಯ್ಯಪ್ಪ ಕೆಲಸಕ್ಕೆ ಹೋದರೆ ಎರಡು, ಮೂರು ದಿನಗಳು ಮನೆಗೆ ಬರುತ್ತಿರಲಿಲ್ಲ. ನಾಗರತ್ನ ಅವರು ರಾಮನಗರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. 

ಇನ್ನು ಅಯ್ಯಪ್ಪನ ಅಕ್ಕನ ಮಗ ಚಂದ್ರು ಎಂಬುವವನ ಜೊತೆ ನಾಗರತ್ನ ಮನೆಯಲ್ಲಿದ್ದಳು. ಕೆಲಸ ಮುಗಿಸಿಕೊಂಡು ಅಯ್ಯಪ್ಪ ಮನೆಗೆ ಬಂದಾಗ ಚಂದ್ರು ಮನೆಯಲ್ಲಿ ಮಲಗಿದ್ದು ಇಬ್ಬರು ಬೆತ್ತಲಾಗಿದ್ದರು. ಅದನ್ನು ನೋಡಿದ ಅಯ್ಯಪ್ಪ, ನಾಗರತ್ನ ಅವರ ಮನೆಯವರನ್ನು ಕರೆಯಿಸಿ ತೋರಿಸಿ ಜಗಳ ಮಾಡಿ ಚಂದ್ರುಗೆ ಮದುವೆಯಾಗಿ ಸಂಸಾರವಿದೆ. ಹೀಗಿದ್ದರೂ ತನ್ನ ಮನೆಯಲ್ಲಿ ಮಲಗಿದ್ದಾನೆ. ಏಕೆ ಬಂದಿದ್ದಾನೆಂದು ಅಯ್ಯಪ್ಪ ಗಲಾಟೆ ತೆಗೆದು ಚಂದ್ರು ಬಳಿಯಿದ್ದ ಮೊಬೈಲ್ ಕಿತ್ತುಕೊಂಡು ಗಲಾಟೆ ಮಾಡಿ ಮಧ್ಯರಾತ್ರಿ ಚಾಕುವಿನ ಇರಿದು ಕೊಲೆ ಮಾಡಿದ್ದಾನೆ.

ಘಟನೆ ಬಳಿಕ ಬಳಿಕ ಚಂದ್ರು ನಾಪತ್ತೆಯಾಗಿದ್ದು, ಸದ್ಯ ಚಂದ್ರು ಕುಟುಂಬದಲ್ಲಿ ಆತಂಕ ಶುರುವಾಗಿದೆ. ಚಂದ್ರು ನಾಪತ್ತೆ, ಮೊಬೈಲ್ ಸ್ವಿಚ್ ಆಫ್ ಹಿಂದೆ ಮತ್ತಷ್ಟು ಅನುಮಾನ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ನಾಗರತ್ನಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರನಗರ ಪೊಲೀಸರು ಕೊಲೆ ಆರೋಪಿ ಅಯ್ಯಪ್ಪನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. 

Similar News