ರುಕ್ಮ ಮೂಲ್ಯ

Update: 2023-06-06 14:32 GMT

ಪುತ್ತೂರು: ನಿವೃತ್ತ ಎಎಸ್ಐ ಆಗಿರುವ ಆರ್ಯಾಪು ಗ್ರಾಮ ಪಂಚಾಯತಿ ಸದಸ್ಯ ರುಕ್ಮ ಮೂಲ್ಯ (64) ಹೃದಯಾಘಾತದಿಂದ ಮಂಗಳವಾರ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು.

ಪೊಲೀಸ್ ಇಲಾಖೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ರುಕ್ಮ ಮೂಲ್ಯ ಅವರು ಎಎಸ್ಐ ಆಗಿ ನಿವೃತ್ತಿ ಹೊಂದಿದ್ದರು. ಬಳಿಕ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿ ಆರ್ಯಾಪು ಗ್ರಾಮ ಪಂಚಾಯತಿಯಲ್ಲಿ  ಬಿಜೆಪಿ ಬೆಂಬಲಿತ ಸದಸ್ಯರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದರು.

ರುಕ್ಮ ಮೂಲ್ಯ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟರು. ತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Similar News

ವಸಂತಿ