ವಾರ್ತಾ ಇಲಾಖೆ ಪ್ರಭಾರ ಜಂಟಿ ನಿರ್ದೇಶಕರಾಗಿ ಮಂಜುನಾಥ ಡೊಳ್ಳಿನ ಅಧಿಕಾರ ಸ್ವೀಕಾರ

Update: 2023-06-06 18:41 GMT

ಬೆಂಗಳೂರು, ಜೂ.6: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಆಡಳಿತ ಶಾಖೆ ಉಪ ನಿರ್ದೇಶಕರಾಗಿರುವ ಮಂಜುನಾಥ ಡೊಳ್ಳಿನ ಅವರು ಆಡಳಿತ ಶಾಖೆ ಮತ್ತು ಸುದ್ದಿ ಮತ್ತು ಪತ್ರಿಕಾ ಶಾಖೆಯ ಪ್ರಭಾರ ಜಂಟಿ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ಹಿಂದೆ ಧಾರವಾಡದಲ್ಲಿ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ಮಂಜುನಾಥ ಡೊಳ್ಳಿನ ಅವರು, ಕಳೆದ ವರ್ಷ ಉಪನಿರ್ದೇಶಕರಾಗಿ ಭಡ್ತಿ ಹೊಂದಿ ಬೆಂಗಳೂರಿಗೆ ವರ್ಗಾವಣೆಯಾಗಿದ್ದರು.

ಉಪನಿರ್ದೇಶಕರಾದ ಪಲ್ಲವಿ ಹೊನ್ನಾಪುರ(ಛಾಯಾಚಿತ್ರ ಮತ್ತು ಚಲನಚಿತ್ರ ಶಾಖೆ), ಸಿದ್ದೇಶ್ವರಪ್ಪ(ಕ್ಷೇತ್ರ ಪ್ರಚಾರ ಶಾಖೆ), ಸಿ.ಆರ್.ನವೀನ(ವಾಣಿಜ್ಯ ಪ್ರಚಾರ ಹಾಗೂ ಪ್ರಕಟಣೆ ಶಾಖೆ)ಪ್ರಭಾರ ಜಂಟಿ ನಿರ್ದೇಶಕರಾಗಿದ್ದು, ರಾಮಲಿಂಗಪ್ಪ ಇವರು ವಾಣಿಜ್ಯ ಶಾಖೆ ಉಪ ನಿರ್ದೇಶಕರಾಗಿ ನಿಯುಕ್ತಿಗೊಂಡಿದ್ದಾರೆ ಎಂದು ವಾರ್ತಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಎಂ.ಜೆಸಿಂತ ಆದೇಶ ಹೊರಡಿಸಿದ್ದಾರೆ.

Similar News