ಬೆಂಗಳೂರು: ಹಜ್ ಯಾತ್ರಿಗಳಿಗೆ ಸಚಿವರಿಂದ ಬೀಳ್ಕೊಡುಗೆ

Update: 2023-06-09 13:14 GMT

ಬೆಂಗಳೂರು: ಹಜ್ ಯಾತ್ರೆ ಕೈಗೊಂಡ ಯಾತ್ರಿಗಳಿಗೆ ವಸತಿ ಹಾಗೂ ಅಲ್ಪಸಂಖ್ಯಾತರ ಸಚಿವ ಝಮೀರ್ ಅಹಮದ್ ಹಾಗೂ ಹಜ್ ಖಾತೆ ಸಚಿವ ರಹೀಮ್ ಖಾನ್ ಶುಕ್ರವಾರ ಮಧ್ಯಾಹ್ನದ ವಿಶೇಷ ಪ್ರಾರ್ಥನೆ ಬಳಿಕ ಶುಭ ಕೋರಿ ಬೀಳ್ಕೊಟ್ಟರು.

ಸಚಿವ ಝಮೀರ್ ಅಹಮದ್ ಅವರು ಯಾತ್ರಿಗಳಿಗೆ ಹಜ್ ಭವನದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಚಿತ ಬಸ್ ಹಾಗೂ ನಿತ್ಯ 35 ಸಾವಿರ ಜನರಿಗೆ ಮೂರು ಹೊತ್ತು ಊಟದ ವ್ಯವಸ್ಥೆ ಮಾಡಿಸಿದ್ದರು. 

ಕಳೆದ ವರ್ಷ ಹಜ್ ಯಾತ್ರೆ ಸಂದರ್ಭದಲ್ಲಿ ಊಟದ ವ್ಯವಸ್ಥೆ ಯಲ್ಲಿ ಸಮಸ್ಯೆ ಯಾಗಿದ್ದರಿಂದ ಸಚಿವರೇ ಈ ಬಾರಿ ಖುದ್ದು ಆಸಕ್ತಿ ವಹಿಸಿ ಊಟ ಹಾಗೂ ಸಾರಿಗೆ ವ್ಯವಸ್ಥೆ ಮಾಡಿಸಿದ್ದಾರೆ. ಜೂನ್ 6 ರಿಂದ 22 ರವರೆಗೆ ಒಟ್ಟು 6 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಿಸಲಾಗಿದೆ.

Similar News