ಕಾಂಗ್ರೆಸ್​ ಸರಕಾರದಿಂದ ದೌರ್ಜನ್ಯ ಆರೋಪ: ಕಾರ್ಯಕರ್ತರಿಗೆ ಸಹಾಯವಾಣಿ​ ಬಿಡುಗಡೆ ಮಾಡಿದ ಬಿಜೆಪಿ

Update: 2023-06-10 12:39 GMT

ಬೆಂಗಳೂರು: ತಮ್ಮ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಸರಕಾರದಿಂದ ಕಾನೂನು ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ 24/7 ಸಹಾಯವಾಣಿಯನ್ನು‌ ಆರಂಭಿಸಿದೆ.

ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕಾನೂನು ನೆರವು ಕೊಡಲು ಸಹಾಯವಾಣಿಗೆ ಚಾಲನೆ ನೀಡಿದರು. 

ಈ ವೇಳೆ ಮಾತನಾಡಿದ  ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಕಾಂಗ್ರೆಸ್ ಸರಕಾರದ ದ್ವೇಷದ ರಾಜಕಾರಣ ಮುಂದುವರಿದಿದೆ. ಅದನ್ನು ಎದುರಿಸಲು ನಮ್ಮ ಕಾರ್ಯಕರ್ತರಿಗೆ ನೆರವಾಗುವ ದೃಷ್ಟಿಯಿಂದ ‘ಕಾನೂನು ಸಹಾಯವಾಣಿ’ (18003091907) ಉದ್ಘಾಟಿಸಲಾಗಿದೆ ಎಂದು ತಿಳಿಸಿದರು.

''ಹೋರಾಟದ ಮೂಲಕವೇ ಬಿಜೆಪಿ‌ ಈ ಹಂತಕ್ಕೆ ಬಂದು ನಿಂತಿದೆ.  ಯಾವುದೇ ಕಾರಣಕ್ಕೂ ನಾವು ವಿಶ್ವಾಸ ಕಳೆದುಕೊಳ್ಳಲ್ಲ. ಈ ಸರ್ಕಾರ, ಪೊಲೀಸ್‌ ಬಳಸಿ ದೌರ್ಜನ್ಯ ಎಸಗಿದರೆ ಸಹಾಯವಾಣಿ ನಂಬರ್​ಗೆ ಕರೆ ಮಾಡಿ, ನಮ್ಮ‌ ವಕೀಲರು ನಿಮ್ಮ ಸಹಾಯಕ್ಕೆ ಬರುತ್ತಾರೆ'' ಎಂದರು.

Similar News