×
Ad

ಎಐ ತಂತ್ರಜ್ಞಾನದಿಂದ ರೈತರ ಭವಿಷ್ಯ ಉಜ್ವಲ: ಬಸವರಾಜ ಹೊರಟ್ಟಿ

Update: 2026-01-15 00:43 IST

ಬೆಂಗಳೂರು : ದೇಶದ ಬೆನ್ನೆಲುಬಾದ ನಮ್ಮ ರೈತರು ಹಿಂದಿಗಿಂತ ಈಗ ಸುಧಾರಣೆಯಾಗಿದ್ದಾರೆ. ಕೃತಕ ಬುದ್ಧಿಮತ್ತೆ (ಎಐ) ಹೊಸ ತಂತ್ರಜ್ಞಾನ ರೈತರಿಗೆ ವರದಾನವಾಗಲಿ, ಎಐ ರೈತರ ಭವಿಷ್ಯ ಉಜ್ವಲವಾಗಲು ಸಹಕಾರಿಯಾಗಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್.ಹೊರಟ್ಟಿ ತಿಳಿಸಿದ್ದಾರೆ.

ಬುಧವಾರ ವಿಧಾನೌಧದಲ್ಲಿ ಹಮ್ಮಿಕೊಂಡಿದ್ದ ರವಿಶಂಕರ್ ಬರೆದಿರುವ ‘ಫಾರ್ಮಾಸಿ ಕ್ಷೇತ್ರದ ಕಾರ್ಯ ನಿರ್ವಹಣಾ ವ್ಯವಸ್ಥೆ ಹಾಗೂ ಎಐ ಮತ್ತು ಕ್ವಾಂಟಮ್ ಸಂಯೋಜನೆ ಮತ್ತು ಅದರ ಸ್ಪರ್ಧಾತ್ಮಕ ಲಾಭಗಳ’ ಕುರಿತ ಪುಸ್ತಕಗಳಗನ್ನು ಬಿಡುಗಡೆ ಮಾತನಾಡಿದ ಅವರು, ರೈತರ ಕುರಿತು ರಾಜ್ಯದ ಜನತೆಗೆ ಮಾಹಿತಿಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ‘ಫಾರ್ಮಾಸಿ ಕ್ಷೇತ್ರದ ಕಾರ್ಯನಿರ್ವಹಣಾ ವ್ಯವಸ್ಥೆ ಹಾಗೂ ಎಐ ಮತ್ತು ಕ್ವಾಂಟಮ್ ಸಂಯೋಜನೆ ಮತ್ತು ಅದರ ಸ್ಪರ್ಧಾತ್ಮಕ ಲಾಭಗಳ ಕುರಿತ ಪುಸ್ತಕಗಳ’ ಬಿಡುಗಡೆ ಮಾಡಲಾಗಿದೆ ಎಂದರು.

ನಮ್ಮಲ್ಲಿ ಕೂಲಿ ಕಾರ್ಮಿಕರು ಲಭ್ಯವಿಲ್ಲದ ಈ ಕಾಲದಲ್ಲಿ ರೈತರಿಗೆ ಈ ಹೊಸ ತಂತ್ರಜ್ಞಾನದಿಂದ ಅನುಕೂಲವಾಗಲಿದೆ. ಆ ಮೂಲಕ ನಮ್ಮ ರೈತರಿಗೆ ಅತ್ಯಾಧುನಿಕ ತಾಂತ್ರಿಕತೆ ಅನುಕೂಲ ಕಲ್ಪಿಸಲಿದೆ ಎಂದು ಬಸವರಾಜ ಹೊರಟ್ಟಿ ಹೇಳಿದರು.

ಲೇಖಕ ಡಾ.ರವಿಶಂಕರ್ ಮಾತನಾಡಿ, ‘ಎಐ-ಚಾಲಿತ ಫಾರ್ಮಾ ಅನುವಂಶದಿಂದ ಮಾರುಕಟ್ಟೆಗೆ’ ಎಂಬ ಪುಸ್ತಕವು ಕೃತಕ ಬುದ್ಧಿಮತ್ತೆ ಔಷಧಶಾಸ್ತ್ರ, ಮೌಲ್ಯ ಸರಪಳಿಯನ್ನು ಹೇಗೆ ಪುನರ್‌ಗಟ್ಟುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ ಎಂದರು.

ಲಕ್ಷ್ಯ ಗುರುತಿಸುವಿಕೆ ಮತ್ತು ಸೃಜನಾತ್ಮಕ ರಸಾಯನಶಾಸ್ತ್ರದಿಂದ ಪ್ರಿಕ್ಲಿನಿಕಲ್ ಮತ್ತು ಕ್ಲಿನಿಕಲ್ ಅಭಿವೃದ್ಧಿ, ಉತ್ಪಾದನೆ, ಸರಬರಾಜು ಸರಪಳಿ ಮತ್ತು ವಾಣಿಜ್ಯ ಕಾರ್ಯಗತಗೊಳಿಸುವಿಕೆ ಕುರಿತು ಏಳು ಭಾಗಗಳು ಮತ್ತು 24 ಅಧ್ಯಾಯಗಳಲ್ಲಿ ರಚಿಸಲಾಗಿದೆ. ಡೇಟಾ ಮೂಲಾಧಾರಗಳು, ಫೌಂಡೇಷನ್ ಮಾದರಿಗಳು, ಮಲ್ಟಿಮೋಡಲ್ ಮತ್ತು ಏಜೆಂಟಿಕ್ ಎಐ, ನಿಯಂತ್ರಣಶಾಸ್ತ್ರ, ನೈತಿಕತೆ ಮತ್ತು ಹೊಸ ಕಾರ್ಯನಿರ್ವಹಣಾ ಮಾದರಿಗಳನ್ನು ಒಟ್ಟಾರೆಯಾಗಿ ಫಾರ್ಮಾಸಿ ಕ್ಷೇತ್ರದ ‘ಎಐ ಕಾರ್ಯನಿರ್ವಹಣಾ ವ್ಯವಸ್ಥೆ’ಯಲ್ಲಿ ವಿವರಿಸಲಾಗಿದೆ ಎಂದು ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News