ಸಂಡೂರು/ಬಳ್ಳಾರಿ: ಆರ್ಯವೈಶ್ಯರ ಸಂಘಗಳ ಆಸ್ತಿಗಳ ಅಭಿವೃದ್ಧಿ ಹಾಗೂ ಲೋಕಕಲ್ಯಾಣದ ಉದ್ದೇಶದಿಂದ ಪ್ರತಿವರ್ಷದಂತೆ ಈ ವರ್ಷವೂ ಚೋರನೂರು–ಬೊಮ್ಮಾಘಟ್ಟ, ಸೋವೇನಹಳ್ಳಿ ಹಾಗೂ ಸಂಡೂರು ವೃಂದ ಗ್ರೂಪ್‌ಗಳ ವತಿಯಿಂದ ಶ್ರಾವಣ ಮಾಸದ 2ನೇ ಶನಿವಾರ ಪಾದಯಾತ್ರೆ ನಡೆಯಿತು.

ಚೋರನೂರು ಗ್ರಾಮದ ಶ್ರೀಮಾತೆ ವಾಸವಿ ಕಲ್ಯಾಣ ಮಂಟಪ ಹಾಗೂ ಶ್ರೀ ಆಂಜನೇಯ ದೇವಸ್ಥಾನದಿಂದ ಬೊಮ್ಮಾಘಟ್ಟೆಯ ಶ್ರೀಕ್ಷೇತ್ರ ಹುಲಿಕುಂಟೇಶ್ವರ ಸ್ವಾಮಿ ದೇವಸ್ಥಾನದವರೆಗೆ ಪಾದಯಾತ್ರೆ ಸಾಗಿತು.

ಪಾದಯಾತ್ರೆಗೆ ಮಂಗಳೂರು ಆರ್ಯವೈಶ್ಯ ಸಂಘದ ಮಾಜಿ ಅಧ್ಯಕ್ಷ ಕುಬೇರ ಶ್ರೇಷ್ಠಿ ಚಾಲನೆ ನೀಡಿ ಮಾತನಾಡಿ, ಪಾದಯಾತ್ರೆಗಳು ಧರ್ಮ ಜಾಗೃತಿ ಮೂಡಿಸುವುದರ ಜೊತೆಗೆ ಸಮಾಜದಲ್ಲಿ ಒಗ್ಗಟ್ಟು ಮತ್ತು ಭಕ್ತಿಭಾವವನ್ನು ಬೆಳೆಸುತ್ತವೆ. ಇಂತಹ ಪರಂಪರೆಯನ್ನು ಮುಂದುವರಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು ಎಂದರು.

ಕಾರ್ಯಕ್ರಮದಲ್ಲಿ ಹೊಸಪೇಟೆ ಆರ್ಯವೈಶ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಎಸ್. ರಮೇಶ್ ಗುಪ್ತ, ಬೊಮ್ಮಾಘಟ್ಟ–ಸೋವೇನಹಳ್ಳಿ ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್.ಟಿ. ಲಕ್ಷ್ಮೀಪತಿ ಶ್ರೇಷ್ಠಿ, ಚೋರನೂರು ಆರ್ಯವೈಶ್ಯ ಸಂಘದ ರಂಗ ಗುರುರಾಜ ಶ್ರೇಷ್ಠಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಚೋರನೂರು ಆರ್ಯವೈಶ್ಯ ಸಂಘದ ಅಧ್ಯಕ್ಷ ಸಿ.ಎಸ್. ಸತೀಶ್ ಕುಮಾರ್, ಕಾರ್ಯದರ್ಶಿ ಸಿ.ಆರ್. ಶ್ರೀಧರ್ ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದ ಆತಿಥ್ಯ ವಹಿಸಿದ್ದರು.

ಕಳೆದ ಮೂರು ವರ್ಷಗಳಿಂದ ಪಾದಯಾತ್ರೆಗೆ ಸಹಕಾರ ನೀಡುತ್ತಿರುವ ಸಂಡೂರು ತಾಲೂಕು ಆರ್ಯವೈಶ್ಯರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಎಸ್.ಟಿ. ಶ್ರೀರಾಮ ಶ್ರೇಷ್ಠಿ, ಪ್ರಧಾನ ಕಾರ್ಯದರ್ಶಿ ವಿಷ್ಣುಕುಮಾರ್ ಆರ್.ವಿ. ಹಾಗೂ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor