×
Ad

ಬೀದರ್ | ಬೇಮಳಖೇಡಾ ಪೊಲೀಸರಿಂದ ಇಸ್ಪೀಟ್ ಜೂಜಾಟದ ಅಡ್ಡೆಗೆ ದಾಳಿ : ಪ್ರಕರಣ ದಾಖಲು

Update: 2025-10-26 23:34 IST

ಬೀದರ್ : ಬೇಮಳಖೇಡಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಎರಡು ಕಡೆಗೆ ಇಸ್ಪೀಟ್ ಜೂಜಾಟದ ಮೇಲೆ ದಾಳಿ ನಡೆಸಿ ಸಾವಿರಾರು ರೂ. ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ದಾಖಲಾಗಿದೆ.

ಎಸ್ಪಿ ಪ್ರದೀಪ್ ಗುಂಟಿ ಅವರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ ಬೇಮಳಖೇಡಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬೇಮಳಖೇಡಾ ಗ್ರಾಮದಲ್ಲಿ ಮತ್ತು ದೇವಗಿರಿ ತಾಂಡಾದ ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಜೂಜಾಟತದಲ್ಲಿ ತೊಡಗಿದ ಮಾಹಿತಿಯಂತೆ ಪಿಎಸ್ಐ ನಿಂಗಪ್ಪ ಅವರು ತಮ್ಮ ಸಿಬ್ಬಂದಿ ಅವರೊಂದಿಗೆ ಪ್ರತ್ಯೇಕವಾಗಿ ಎರಡು ಕಡೆ ದಾಳಿ ಮಾಡಿದ್ದಾರೆ.

ಬೇಮಳಖೇಡಾ ಗ್ರಾಮದಲ್ಲಿ 9,800 ರೂ. ಹಾಗೂ ದೇವಗಿರಿ ತಾಂಡಾದಲ್ಲಿ2,100 ರೂ. ಹಾಗೂ ಹೀಗೆ ಒಟ್ಟು 11,900 ರೂ. ವಶಪಡಿಸಿಕೊಂಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಬೇಮಳಖೇಡಾ ಗ್ರಾಮದ ಘಟನೆಗೆ ಸಂಬಂಧಿಸಿದಂತೆ 13 ಮತ್ತು ದೇವಗಿರಿ ತಾಂಡಾದ ಘಟನೆಗೆ ಸಂಬಂಧಿಸಿದಂತೆ 7 ಜನರ ವಿರುದ್ಧ ಬೇಮಳಖೇಡಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News