Bidar | ಬಸವಕಲ್ಯಾಣದಲ್ಲಿ ಯುವಕನ ಹತ್ಯೆ
Update: 2026-07-30 20:33 IST
ಬಸವಕಲ್ಯಾಣ : ನಗರದಲ್ಲಿ ಹಾಡಹಗಲೇ ಯುವಕನೊಬ್ಬನ ಹತ್ಯೆ ಮಾಡಲಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಯಲ್ಲದಗುಂಡಿ ತಾಂಡಾದ ನಿವಾಸಿ ನಿಖಿಲ್ ಚೌವ್ಹಾಣ್ (35) ಹತ್ಯೆಯಾದವರು.
ಈ ಘಟನೆಯು ಬಸವಕಲ್ಯಾಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.