ಎಂ.ಎ. ಮನ್ಸೂರ್
Update: 2026-01-29 20:31 IST
ಸುರತ್ಕಲ್ : ಇಲ್ಲಿನ ಚೊಕ್ಕಬೆಟ್ಟು ನಿವಾಸಿ ಎಂ ಎ ಮನ್ಸೂರ್ (78) ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜ.26ರಂದು ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರು ಸುಮಾರು ಎರಡು ದಶಕಗಳ ಕಾಲ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಕಾಟಿಪಳ್ಳ ಹಾಗೂ ಸುರತ್ಕಲ್ ಶಾಖೆಯಲ್ಲಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಪ್ರಾಮಾಣಿಕ ಹಾಗೂ ನಿಷ್ಠಾವಂತವಂತರಾಗಿ ಸೇವೆ ಸಲ್ಲಿಸಿ ಸುರತ್ಕಲ್ ಪರಿಸರ ದಲ್ಲಿ ಬ್ಯಾಂಕ್ ಮನ್ಸೂರ್ ಎಂದು ಜನಪ್ರಿಯ ರಾಗಿದ್ದರು.