×
Ad

ಬಿ.ರವಿರಾಜ್ ಹೆಗ್ಡೆ

Update: 2023-11-20 19:50 IST

ಉಡುಪಿ, ನ.20: ಉಡುಪಿ ಕಕ್ಕುಂಜೆಯ ಬಿ.ರವಿರಾಜ ಹೆಗ್ಡೆ (80) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಇವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಬೇಳೂರು ದೊಡ್ಡಮನೆ ಪಟೇಲ್ ರಾಮಣ್ಣ ಹೆಗ್ಡೆಯವರ ಪುತ್ರರಾದ ರವಿರಾಜ ಹೆಗ್ಡೆ, ಪ್ರಗತಿಪರ ಕೃಷಿಕರಾಗಿದ್ದರು. ವೃತ್ತಿಯಲ್ಲಿ ವಿದ್ಯುತ್ ಗುತ್ತಿಗೆ ದಾರರಾಗಿದ್ದ ಇವರು ಯಕ್ಷಗಾನದ ಬಗ್ಗೆ ತೀವ್ರವಾದ ಒಲವು ಹೊಂದಿದ್ದು, ಉಡುಪಿ ಯಕ್ಷಗಾನ ಕಲಾರಂಗದ ಅಜೀವ ಸದಸ್ಯರಾಗಿದ್ದರು.

ರವಿರಾಜ ಹೆಗ್ಡೆ ಅವರ ಸೂಚನೆಯಂತೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಅವರ ದೇಹವನ್ನು ದಾನ ಮಾಡಲಾಗಿದೆ. ಇವರ ನಿಧನಕ್ಕೆ ಕಲಾರಂಗ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News