ಕೆಸಿಎಫ್ ಯುಎಇ ಸನ್ನದ್ದ ಸಂಘಕ್ಕೆ ನೂತನ ಸಾರಥ್ಯ

Update: 2026-07-28 19:08 IST

ದುಬೈ: ಅನಿವಾಸಿ ಕನ್ನಡಿಗರ ನೆಚ್ಚಿನ ಸಂಘಟನೆಯಾಗಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಕಲ್ಚರಲ್ ಪೌಂಡೇಶನ್ ಕೆಸಿಎಫ್ ಇದರ ಯುಎಇ ರಾಷ್ಟ್ರೀಯ ಸಮಿತಿಯ ಸಹಯೋಗದೊಂದಿಗೆ ಯುಎಇಯಾದ್ಯಂತ ನಡೆಸಲಾಗುವ ಸಮಾಜಕಲ್ಯಾಣ ಮತ್ತು ತುರ್ತು ಸಮಯದ ಸ್ವಯಂಸೇವಕರ ಸನ್ನದ್ಧ ಸಂಘಕ್ಕೆ ನೂತನ ಸಾರಥಿಗಳನ್ನು ಇತ್ತೀಚೆಗೆ ಘೋಷಿಸಲಾಯಿತು.

ಝೈನುದೀನ್ ಹಾಜಿ ಬೆಳ್ಳಾರೆ ಚೆಯರ್ಮನ್, ಸಮದ್ ಬಿರಾಳಿ ಕನ್ವೀನರ್, ನವಾಝ್ ಹಾಜಿ ಕೋಟಿಕ್ಕಾರ್ ಕೋರ್ಡಿನೇಟರ್ ಮತ್ತು ರಝಾಕ್ ಸಅದಿ ವಗ್ಗ ಮೀಡಿಯಾ ಕನ್ವೀನರ್ ರನ್ನಾಗಿ ಆಯ್ಕೆ ಮಾಡಲಾಯಿತು.

ಕೆಸಿಎಫ್ 13 ವರ್ಷಗಳಿಂದ ಅನಿವಾಸಿ ಕನ್ನಡಿಗರ ಶ್ರೇಯಾಭಿವೃದ್ದಿಗಾಗಿ ಶ್ರಮಿಸುತ್ತಿದ್ದು ಯುಎಇ ಸೇರಿದಂತೆ ಎಲ್ಲಾ ಗಲ್ಫ್ ರಾಜ್ಯಗಳು ಮಾತ್ರವಲ್ಲದೆ ಈಜಿಫ್ಟ್, ಲಂಡನ್ ಮತ್ತು ಜಪಾನ್ ರಾಷ್ಟ್ರಗಳಲ್ಲೂ ಕಾರ್ಯಚರಿಸುತ್ತಿದೆ.

ಉದ್ಯೋಗ ಮತ್ತು ವೀಸ ವಂಚನೆ ಪ್ರಕರಣಗಳಲ್ಲಿ ಕಾನೂನಾತ್ಮಕ ಸಹಾಯ, ನಿರುದ್ಯೋಗಿ ಅನಿವಾಸಿಗಳ ಆಹಾರ, ವಸತಿ ಮತ್ತು ಮರು ಪ್ರಯಾಣ ಟಿಕೆಟ್ ಗಳ ವ್ಯವಸ್ಥೆಯನ್ನು ಕೂಡಾ ಮಾಡಿದೆ.

ಯಎಇ ಸರಕಾರಿ ಬ್ಲಡ್ ಬ್ಯಾಂಕ್ ಸಂಯೋಜನೆಯೊಂದಿಗೆ ಹಲವು ಯಶಸ್ವಿ ರಕ್ತದಾನ ಮತ್ತು ಆರೋಗ್ಯ ತಪಾಸಣ ಶಿಬಿರಗಳನ್ನು ಏರ್ಪಡಿಸಿ ಸರಕಾರದ ಹಲವು ಗೌರವ ಪತ್ರಗಳನ್ನು ಪಡೆದುಕೊಂಡಿದೆ.

ಕೋವಿಡ್ ಸೇರಿದಂತೆ ಭಾರತ ಮತ್ತು ವಿಶ್ವದ ಹಲವು ಕಡೆ ನಡೆದ ಪ್ರಾಕೃತಿಕ ದುರಂತಗಳ ಸಮಯದಲ್ಲಿ ಅಗತ್ಯ ನೆರವುಗಳನ್ನು ಒದಗಿಸಲಾಗಿದೆ.

ರೋಗಿಗಳ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದು ಹೆಚ್ಚಿನ ಚಿಕಿತ್ಸೆ ಅಥವಾ ವಿಶ್ರಾಂತಿಗಾಗಿ ಊರಿನ ಪ್ರಯಾಣದ ವೆಚ್ಚವನ್ನು ಮತ್ತು ವಾರಿಸುದಾರಿಲ್ಲದ ಹಲವು ಮೃತ ದೇಹಗಳ ವಿಲೇವಾರಿ ಮಾಡಲು ಮತ್ತು ಅವುಗಳ ಪರಿಪಾಲನೆ ಮತ್ತು ಸ್ಥಳೀಯ ದಫನ ಅಥವಾ ಊರಿಗೆ ತಲುಪಿಸುವ ಕಾರ್ಯಗಳಲ್ಲಿ ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News