×
Ad

ಹಾವೇರಿ: ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲು

Update: 2023-12-25 11:38 IST
ಸಾಂದರ್ಭಿಕ ಚಿತ್ರ

ಹಾವೇರಿ: ನೀರಿನ ಹೊಂಡದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರು ಪಾಲಾದ ಘಟನೆ ಬ್ಯಾಡಗಿ ತಾಲೂಕಿನ ಘಾಲಪೂಜೆ ಗ್ರಾಮದಲ್ಲಿ ರವಿವಾರ ನಡೆದಿದೆ.

ಮೃತ ಬಾಲಕರನ್ನು ನಾಗರಾಜ (11), ಹೇಮಂತ (12) ಎಂದು ಗುರುತಿಸಲಾಗಿದೆ.  ನಿನ್ನೆ ಸಾಯಂಕಾಲ ಈಜಲು ತೆರಳಿದ್ದ ಬಾಲಕರು ಮುಳುಗಿದ್ದನ್ನು ತಡರಾತ್ರಿ ಪತ್ತೆಹಚ್ಚಲಾಗಿದೆ.

ಗ್ರಾಮಸ್ಥರು ಬಾಲಕರ ಮೃತದೇಹಗಳನ್ನು ನೀರಿನಿಂದ ಹೊರ ತೆಗೆದಿದ್ದಾರೆ. ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News