×
Ad

ಭಾರತವು ಪಾಕ್ ಮೇಲೆ ದಾಳಿ ನಡೆಸಿದರೆ ಬಾಂಗ್ಲಾದೇಶ ಈಶಾನ್ಯವನ್ನು ಆಕ್ರಮಿಸಿಕೊಳ್ಳಬೇಕು: ಬಾಂಗ್ಲಾದ ನಿವೃತ್ತ ಸೇನಾಧಿಕಾರಿಯ ಹೇಳಿಕೆ

Update: 2025-05-02 22:03 IST

PC : PTI 

ಢಾಕಾ: ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ನೆಪವಾಗಿಸಿಕೊಂಡು ಒಂದು ವೇಳೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ಬಾಂಗ್ಲಾದೇಶವು ಭಾರತದ ಈಶಾನ್ಯ ರಾಜ್ಯಗಳನ್ನು ಆಕ್ರಮಿಸಿಕೊಳ್ಳಬೇಕು ಎಂದು ಬಾಂಗ್ಲಾದ ನಿವೃತ್ತ ಸೇನಾಧಿಕಾರಿ, ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರಕ್ಕೆ ನಿಕಟವಾಗಿರುವ ಮೇ| ಜ| ಫಜ್ಲೂರ್ ರಹಮಾನ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಬಾಂಗ್ಲಾದ ಗಡಿಭದ್ರತಾ ಪಡೆಯ ಮಾಜಿ ಮುಖ್ಯಸ್ಥರಾಗಿರುವ ರಹಮಾನ್ ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್ ನಲ್ಲಿ `ಬಾಂಗ್ಲಾವು ಜಂಟಿ ಮಿಲಿಟರಿ ವ್ಯವಸ್ಥೆಗಾಗಿ ಚೀನಾದೊಂದಿಗೆ ಮಾತುಕತೆಯನ್ನು ಆರಂಭಿಸಬೇಕು' ಎಂದಿದ್ದಾರೆ. ಒಂದು ವೇಳೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಬಾಂಗ್ಲಾವು ಈಶಾನ್ಯ ಭಾರತದ 7 ರಾಜ್ಯಗಳನ್ನು ಆಕ್ರಮಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಂಟಿ ಮಿಲಿಟರಿ ವ್ಯವಸ್ಥೆಗಾಗಿ ಚೀನಾದೊಂದಿಗೆ ಮಾತುಕತೆಯನ್ನು ಆರಂಭಿಸಬೇಕು ಎಂದಿದ್ದಾರೆ.

ರಹಮಾನ್ ಹೇಳಿಕೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಖಂಡನೆ, ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಾಂಗ್ಲಾ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರರ ಕಚೇರಿಯ ಪತ್ರಿಕಾ ಕಾರ್ಯದರ್ಶಿ ಶಫೀಕುಲ್ ಅಲಾಮ್ ` ರಹಮಾನ್ ಅವರ ಹೇಳಿಕೆ ವೈಯಕ್ತಿಕವಾದದ್ದು. ಅವರ ನಿಲುವು ಮಧ್ಯಂತರ ಸರಕಾರದ ನಿಲುವಲ್ಲ. ಬಾಂಗ್ಲಾದೇಶವು ಎಲ್ಲಾ ರಾಷ್ಟ್ರಗಳ ಸಾರ್ವಭೌಮತೆ ಮತ್ತು ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಮತ್ತು ಇದನ್ನೇ ಇತರರಿಂದಲೂ ನಿರೀಕ್ಷಿಸುತ್ತದೆ. ರಹಮಾನ್ ಅವರ ಹೇಳಿಕೆಯ ವಿವಾದದಲ್ಲಿ ಬಾಂಗ್ಲಾ ಸರಕಾರವನ್ನು ಎಳೆಯಬಾರದು' ಎಂದು ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News